ಗಂಗಾವತಿ : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಕೊಪ್ಪಳ ಜಿಲ್ಲೆಯ ವಾರ್ಷಿಕ ಮಹಾಸಭೆ ಜಿಲ್ಲಾಧ್ಯಕ್ಷ ಮೆಹಬೂಬ್ ಬಸಾಪಟ್ಟಣ ರವರ ಅಧ್ಯಕ್ಷತೆಯಲ್ಲಿ ಗಂಗಾವತಿ ಜಾಮಿಯಾ ಮಸೀದಿ ಸಭಾಭವನದಲ್ಲಿ ನಡೆಯಿತು.
ಎಸ್ವೈಎಸ್ ಜಿಲ್ಲಾಧ್ಯಕ್ಷ ಮೌಲಾನಾ ನಝೀರ್ ಅಹ್ಮದ್ ಸಭೆಯನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯ ಪ್ರಭಾರ ಅಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ ತರಗತಿ ನಡೆಸಿದರು. ಕೌನ್ಸಿಲ್ ವೀಕ್ಷಕರಾಗಿ ಆಗಮಿಸಿದ ರಾಜ್ಯ ನಾಯಕ ಸಫ್ವಾನ್ ಚಿಕ್ಕಮಗಳೂರು ನೂತನ ಜಿಲ್ಲಾ ಸಮಿತಿಯನ್ನು ಘೋಷಣೆ ಮಾಡಿದರು.
ನೂತನ ಜಿಲ್ಲಾ ಅಧ್ಯಕ್ಷರಾಗಿ ಖಾಝಿ ರಾಶಿದ್ ಯಲಬುರ್ಗಾ, ಪ್ರಧಾನ ಕಾರ್ಯದರ್ಶಿಯಾಗಿ ಸಲೀಂ ಕೊಪ್ಪಳ ಹಾಗೂ ಕೋಶಾಧಿಕಾರಿಯಾಗಿ ಖ್ವಾಜಾ ರಝಾ ಬರಕಾತಿ ಗಂಗಾವತಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಹಾಫಿಝ್ ಸಲೀಂ ಗಂಗಾವತಿ, ಹಾಫಿಝ್ ಹುಸೈನ್ ನರ್ಸಾಪುರ, ಕಾರ್ಯದರ್ಶಿಗಳಾಗಿ ಇಮ್ರಾನ್ ಕನಕಗಿರಿ, ಮೆಹಬೂಬ್ ರಝಾ ಗಂಗಾವತಿ, ಹಾಫಿಝ್ ಯೂಸುಫ್ ತಾವರಗೇರಾ, ಅಶ್ರಫ್ ಹಿರೇ ಬೆನಕಲ್, ನೌಫಲ್ ಮರ್ಝೂಖಿ ಸಿದ್ದಾಪುರ, ಮೌಲಾನಾ ಜಾಫರ್ ಸಿದ್ದಾಪುರ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಖಾಜಾ ಮೌಲಾನಾ ಸಂಗಾಪುರ, ಮೆಹಬೂಬ್ ಬಸಾಪಟ್ಟಣ, ಖಾಝಿ ಗುಲಾಂ ಹುಸೈನ್ ನೂರಿ, ಬಿಲಾಲ್ ಮುಈನಿ ತಾವರಗೇರಾ, ಫಾರೂಖ್ ಕುಷ್ಟಗಿ, ಫಕೀರ್ ಸಾಬ್ ದಮ್ಮೂರ್, ಅಮೀರ್ ಸೋಂಪೂರು, ಖಾಜಾ ತಾಷ ಗಂಗಾವತಿ, ಮೌಲಾನಾ ಝುಹೈರುದ್ದೀನ್ ಕುಷ್ಟಗಿ, ರಹೀಂ ಶೈಖ್ ಕೊಪ್ಪಳ, ಇಮ್ರಾನ್ ರಝಾ ಗಂಗಾವತಿ, ಹಾಫಿಝ್ ಸುಫ್ಯಾನ್ ಸಖಾಫಿಯವರನ್ನು ಆಯ್ಕೆ ಮಾಡಲಾಯಿತು.