janadhvani

Kannada Online News Paper

ಅಲ್-ಮದೀನತುಲ್ ಮುನವ್ವರ ಮೂಡಡ್ಕ: ಜುಬೈಲ್ ಸಾರ ಮಶ್ಹೂರ್ ಸಮಿತಿ ಅಸ್ತಿತ್ವಕ್ಕೆ

ಮೂಡಡ್ಕ ಅಲ್ ಮದೀನತುಲ್ ಮುನವ್ವರ ಎಜುಕೇಶನಲ್ ಸೆಂಟರ್ ಮೂಡಡ್ಕ ಉಪ್ಪಿನಂಗಡಿ ಸ್ವಲಾತ್ ಮಜ್ಲಿಸ್ ಹಾಗೂ ಅಗಲಿದ ಸಂಸ್ಥೆ, ಸಂಘಟನೆಗಳ ಹಾಗೂ ಕುಟುಂಬದಿಂದ ಮರಣಹೊಂದಿದ ಸದಸ್ಯರ ಮೇಲೆ ತಹ್ಲೀಲ್ ಸಮರ್ಪಣೆ ಹಾಗೂ ದುಆ ಮಜ್ಲಿಸ್ ಕಾರ್ಯಕ್ರಮವು ಬಹು: ಅಬ್ದುಲ್ ಕರೀಂ ಲತ್ವೀಫಿ ಸೋಕಿಲರವರ ನೆತೃತ್ವದಲ್ಲಿ ಸೌದಿ ಜುಬೈಲ್ ಸಾರ ಮಶ್ಹೂರ್ ನಲ್ಲಿ ನಡೆಯಿತು.

ನಂತರ ನಡೆದ ಸಮಿತಿ ರಚನೆ ಓರ್ಗನೆಝರ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಮೂಡಡ್ಕ ಸೌದಿ ನ್ಯಾಶನಲ್ ಸಮಿತಿಯ ಸದಸ್ಯರು ಸುಲೈಮಾನ್ ಮಾಚಾರ್ ಉಪಸ್ಥಿತರಿದ್ದರು.

ಸಭಾಧ್ಯಕ್ಷರು ತಮ್ಮ ಅದ್ಯಕ್ಷ ಭಾಷಣದಲ್ಲಿ ಸಂಸ್ಥೆ ಹಾಗೂ ಸಂಘಟನೆಯ ಕಾರ್ಯಚರಣೆಯ ಬಗ್ಗೆ ವಿವರಿಸಿದರು. ಮೂಡಡ್ಕ ಸೌದಿ ನ್ಯಾಶನಲ್ ಸಮಿತಿ ಸದಸ್ಯರಾದ ಸುಲೈಮಾನ್ ಮಾಚಾರ್ ನೂತನ ಸಮಿತಿ ರಚನೆಗೆ ನೇತೃತ್ವ ನೀಡಿದರು. 2021-2022ರ ಸಾಲಿನ ಸಮಿತಿ ಸಾರಥಿಗಳು
ಗೌರವ ಅಧ್ಯಕ್ಷರು ಸುಲೈಮಾನ್ ಮಾಚಾರ್,
ಅದ್ಯಕ್ಷರಾಗಿ ಮುಹಮ್ಮದ್ ರಫೀಕ್ ಸುನ್ನತ್ ಕೆರೆ , ಪ್ರಧಾನ . ಕಾರ್ಯದರ್ಶಿಯಾಗಿ ಅಶ್ರಫ್ ಸುನ್ನತ್ ಕೆರೆ, ಕೋಶಾಧಿಕಾರಿಯಾಗಿ ಸಂಸುದೀನ್ ಸುನ್ನತ್ ಕೆರೆ.

ಉಪಾದ್ಯಕ್ಷರಾಗಿ ಅಶ್ರಫ್ ಉಳ್ತೂರು ವೆಣೂರು , ಜೊತೆಕಾರ್ಯದರ್ಶಿಯಾಗಿ ಝೈನುದ್ದೀನ್ ನಂದಾವರ, ಸಂಚಾಲಕರಾಗಿ ಪಝಲ್ ಮಂಗಳೂರು ಆಯ್ಕೆಗೊಂಡರು. ಕಾರ್ಯಕಾರಿ ಸದಸ್ಯರಾಗಿ ಅಬ್ದುಲ್ ರಝಾಕ್ ಬಾಂಬಿಲ, ರಹ್ಮಾತುಲ್ಲಾ ಸುನ್ನತ್ ಕೆರೆ, ಶಬೀರ್ ಸುನ್ನತ್ ಕೆರೆ, ಸಫ್ವಾನ್ ಬಂಗೇರಿ ಕಟ್ಟೆ ನಿಯಾಝ್ ಬಂಟ್ವಾಳ,
ರಫೀಕ್ ಸಾಗರ ಎಂಬವರನ್ನು ಆರಿಸಲಾಯಿತು. ಸುಲೈಮಾನ್ ಮಾಚಾರ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ಅಶ್ರಫ್ ಸುನ್ನತ್ ಕೆರೆ ಧನ್ಯವಾದಗೈದರು.

error: Content is protected !! Not allowed copy content from janadhvani.com