janadhvani

Kannada Online News Paper

ಎಸ್ಸೆಸ್ಸೆಫ್ ಈಶ್ವರಮಂಗಲ ಸೆಕ್ಟರ್: ನೂತನ ಸಾರಥಿಗಳು

ಪುತ್ತೂರು : ಎಸ್ಸೆಸ್ಸೆಫ್ ಈಶ್ವರಮಂಗಲ ಸೆಕ್ಟರ್ ಇದರ ಮಹಾಸಭೆಯು ದಿನಾಂಕ 03-01-2021 ಆದಿತ್ಯ ರಾತ್ರಿ 7ಗಂಟೆಗೆ ಸರಿಯಾಗಿ ಈಶ್ವರಮಂಗಲ ತ್ವೈಬ ಸೆಂಟರ್ ನಲ್ಲಿ ನಡೆಯಿತು.

ಸೆಕ್ಟರ್ ಅಧ್ಯಕ್ಷರಾಗಿದ್ದ ಅಬೂಬಕರ್ ಲತೀಫಿ ಸಬಾಧ್ಯಕ್ಷತೆ ವಹಿಸುವ ಮೂಲಕ ಕಾರ್ಯಕ್ರಮಕ್ಕೆ SSF ಡಿವಿಷನ್ ನಾಯಕರಾದ ಹುಸೈನ್ ಜೌಹರಿರವರು ದುಆ ನೆರವೇರಿಸಿ ಚಾಲನೆ ನೀಡಿದರು. ಎಸ್ ವೈ ಎಸ್ ಈಶ್ವರಮಂಗಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕೊಯಿಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಿವಿಷನ್ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಸಖಾಫಿ, ಪಾಣಾಜೆ ಕಾರ್ಯದರ್ಶಿ ಹಾರಿಸ್ ಅಡ್ಕ ಹಾಗೂ ರಫೀಕ್ ಮನ್ನಾಪು ರವರು ವೀಕ್ಷಕರಾಗಿ ಆಗಮಿಸಿದರು.

ನೂತನ ಸಮಿತಿ ಸಾರಥಿಗಳು:
ಅಧ್ಯಕ್ಷರು ಶಿಹಾಬುದ್ದೀನ್ ಸಖಾಫಿ, ಉಪಾಧ್ಯಕ್ಷರು ಸ್ವಾದಿಕ್ ಇಂದಾದಿ ಹಾಗೂ ಅಬ್ದುಲ್ ರಹಿಮಾನ್ ಅನಿಳೆ, ಪ್ರಧಾನ ಕಾರ್ಯದರ್ಶಿ ಸಲೀಂ ಝುಹ್ರಿ, ಕಾರ್ಯದರ್ಶಿಗಳಾಗಿ ಸಲ್ಮಾನ್ ಅಹ್ಮದ್ ಹಾಗೂ ಬಶೀರ್ ಮೀನಾವು, ಕೋಶಾಧಿಕಾರಿ ಅಬ್ದುಲ್ ಲತೀಫ್ ಮೇನಾಲ, ಕ್ಯಾಂಪಸ್ ಕಾರ್ಯದರ್ಶಿ ಯಾಗಿ ನೌಫಾನ್ ಕಾವು ಅದೇ ರೀತಿ ಕಾರ್ಯಾಕಾರಿ ಸಮಿತಿ ಸದಸ್ಯರಾಗಿ ಹುಸೈನ್ ಜೌಹರಿ, ಶಫೀಕ್ ಸಅದಿ, ಅಬೂಬಕ್ಕರ್ ಲತೀಫಿ, ಇರ್ಫಾನ್ ಮಾಡನ್ನೂರು, ನಾಸಿರ್ ಕುಕ್ಕಾಜೆ, ರಫೀಕ್ ಹುಮೈದಿ, ರಮೀಝ್ ಕೊಯಿಲ, ಇರ್ಷಾದ್ ಕುಕ್ಕಾಜೆ, ಸಲೀತ್ ಮಾಡನ್ನೂರು, ಶಫೀಕ್ ಮೇನಾಲ, ಮುಸ್ತಫಾ ಮೀನಾವು, ಶಫೀಕ್ ಮುಂಡ್ಯ, ಜೌಹರ್ ಬಡಗನ್ನೂರ್, ಫೈಝಲ್ ಮೈಂದನಡ್ಕ, ಶರ್ವಾನ್ ಕಾವು ರವರನ್ನು ಆರಿಸಲಾಯಿತು.

ಸೆಕ್ಟರ್ ನಲ್ಲಿ ಹಲವಾರು ವರ್ಷಗಳ ಕಾಲ ಸಂಘಟನೆಗಾಗಿ ದುಡಿದು ಎಸ್ ವೈ ಎಸ್ ಗೆ ಪಾದಾರ್ಪಣೆ ಗೊಂಡ ಶಂಶುದ್ದೀನ್ ಹನೀಫಿ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು
ಸಭೆಯಲ್ಲಿ ತ್ವೈಬ ಎಜುಕೇಶನಲ್ ಸೆಂಟರ್ ಮುದರ್ರಿಸರಾದ ದಾವೂದುಲ್ ಹಕೀಂ ಹಿಮಮಿ ಸಖಾಫಿ ಉಸ್ತಾದರು ಶುಭಹಾರೈಸಿದರು. ಕಾರ್ಯದರ್ಶಿ ಸ್ವಾದಿಕ್ ಇಂದಾದಿ ಸ್ವಾಗತಿಸಿಯ
ನೂತನ ಕಾರ್ಯದರ್ಶಿ ಸಲೀಂ ಝುಹ್ರಿ ವಂದಿಸಿದರು.

error: Content is protected !! Not allowed copy content from janadhvani.com