ಮಂಜನಾಡಿ ಸೆಕ್ಟರ್ ವ್ಯಾಪ್ತಿಯ ಸಾರ್ತಬೈಲ್ ಶಾಖೆಯ ವಾರ್ಷಿಕ ಸಭೆಯು ದಿನಾಂಕ 11ರಂದು ಶುಕ್ರವಾರ ನಡೆಯಿತು.
ಸಭೆಯಲ್ಲಿ ನೂತನ ಸಮಿತಿಯ ಸಾರಥಿಗಳನ್ನು ಆಯ್ಕೆಮಾಡಲಾಯಿತು.
ನೂತನ ಅಧ್ಯಕ್ಷರಾಗಿ- ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ -ಜಾಬಿರ್, ಉಪಾಧ್ಯಕ್ಷರಾಗಿ – ಉಮರ್ ಶಾಹಿದ್ ಕೋಶಾಧಿಕಾರಿಯಾಗಿ-ನೌಫಲ್. ಕಾರ್ಯದರ್ಶಿಗಳಾಗಿ – ರಾಝಿಕ್, ನೌಶಾದ್, ಇಕ್ಬಾಲ್ ಮುಸ್ಲಿಯಾರ್,ಹಾಫಿಲ್ ರಶಾದ್,ಝಿಯಾದ್,ನಿಯಾದ್ ರವರನ್ನು ಆಯ್ಕೆ ಮಾಡಲಾಯಿತು.
ಝಾಹಿದ್ ರವರು ಸ್ವಾಗತಿಸಿ, ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಅಧ್ಯಕ್ಷ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಮುಡಿಪು ಡಿವಿಜನ್ ಅಧ್ಯಕ್ಷರಾದ ಇಬ್ರಾಹಿಂ ಅಹ್ಸನಿ ಉಸ್ತಾದರು ಕಾರ್ಯಕರ್ತರಿಗೆ ಸಂಘಟನಾ ತರಬೇತಿ ನೀಡಿದರು. ಕಾರ್ಯಕ್ರಮದ ವೀಕ್ಷಿಣಾ ಅಧಿಕಾರಿಗಳಾಗಿ ಮಂಜನಾಡಿ ಸೆಕ್ಟರ್ ಪ್ರಧಾನಕಾರ್ಯದರ್ಶಿ ಮುನೀರ್ ಕಲ್ಮಿಂಜ ಹಾಗೂ ಮಜೀದ್ ಮಂಜನಾಡಿ ಆಗಮಿಸಿದ್ದರು.