janadhvani

Kannada Online News Paper

ಎಸ್ಸೆಸ್ಸೆಫ್ ಪಾಳ್ಯತ್ತಡ್ಕ ಶಾಖೆಗೆ ನೂತನ ಸಾರಥಿಗಳು

S S F ಪಾಳ್ಯತ್ತಡ್ಕ ಶಾಖೆಯ ಮಹಾಸಭೆಯು ದಿನಾಂಕ 13-12-2020 ರಂದು ಸಲೀಂ ಝುಹ್ರಿ ಯವರ ಅಧ್ಯಕ್ಷತೆಯಲ್ಲಿ ಈಶ್ವರಮಂಗಲ ತ್ವೈಬ ಸೆಂಟರ್ ನಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ SYS ನಾಯಕರಾದ ಉಮರ್ ಸಅದಿ ರವರು ದುಆದ ಮೂಲಕ ಚಾಲನೆ ನೀಡಿದರು. ಸಲ್ಮಾನ್ ಅಹ್ಮದ್ ರವರು ಸ್ವಾಗತಿಸಿದರು.ತ್ವೈಬ ಎಜುಕೇಶನಲ್ ಸೆಂಟರ್ ಮುದರ್ರಿಸರಾದ ದಾವೂದುಲ್ ಹಕೀಂ ಹಿಮಮಿ ಸಖಾಫಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮಕ್ಕೆ ವೀಕ್ಷಕರಾಗಿ ಬಂದತಹ SSF ಈಶ್ವರಮಂಗಲ ಸೆಕ್ಟರ್ ಅಧ್ಯಕ್ಷರಾದ ಅಬೂಬಕರ್ ಲತೀಫಿ ಯವರು ಸಂಘಟನೆಯ ಮಹತ್ವದ ಕುರಿತು ತರಗತಿ ನಡೆಸಿದರು.
ಸಮಿತಿಯ ನೂತನ ಸಾರಥಿಗಳು
ಅಧ್ಯಕ್ಷರಾಗಿ ಹಾಫಿಳ್ ಸಿನಾನ್ ಮುಸ್ಲಿಯಾರ್. ಪ್ರಧಾನ ಕಾರ್ಯದರ್ಶಿ ಯಾಗಿ ಸಿನಾನ್ ಮುಸ್ಲಿಯಾರ್ ಕತ್ರಿಬೈಲು, ಹಾಗೂ ಕೋಶಾಧಿಕಾರಿಯಾಗಿ ಶಫೀಕ್ ಮುಂಡ್ಯ ರವನ್ನು ಆರಿಸಲಾಯಿತು.

ಉಪಾಧ್ಯಕ್ಷರಾಗಿ ಸ್ವಾಲಿಹ್ ಸಖಾಫಿ ಮತ್ತು ರವೂಫ್ ಚೋಯ್ಸ್, ಹಾಗೂ ಕಾರ್ಯದರ್ಶಿಗಳಾಗಿ ಸಲ್ಮಾನ್ ಅಹ್ಮದ್,ಮುಹಮ್ಮದ್ ಅನಸ್ ಅಹ್ದಲ್ ನಗರ್,ಝರ್ಬಾಸ್ ರವರನ್ನು ಆರಿಸಲಾಯಿತು.ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹುಸೈನ್ ಜೌಹರಿ,ಸಲೀಂ ಝುಹ್ರಿ,ಶಿಹಾಬುದ್ದೀನ್ ಸಖಾಫಿ, ಸಿನಾನ್ ಕೋಂಕೆ, ನಜ್ಮುದ್ದೀನ್, ಸಅದುದ್ದೀನ್, ಅನಸ್.ಕೆ.ಪಿ ರವರನ್ನು ಆರಿಸಲಾಯಿತು.

ಸಭೆಯಲ್ಲಿ SYS ನಾಯಕರಾದ ಉಮರ್ ಸ-ಅದಿ ಉಸ್ತಾದರು ಶುಭಹಾರೈಸಿ,ಪ್ರಾರ್ಥನೆ ನಡೆಸಿದರು, ನೂತನ ಅಧ್ಯಕ್ಷರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕೊನೆಯಲ್ಲಿ ನೂತನ ಕಾರ್ಯದರ್ಶಿ ಸಿನಾನ್ ಮುಸ್ಲಿಯಾರ್ ಕತ್ರಿಬೈಲು ಧನ್ಯವಾದ ಸಮರ್ಪಿಸಿದರು.

error: Content is protected !! Not allowed copy content from janadhvani.com