janadhvani

Kannada Online News Paper

ಮಸ್‌ದರ್ : ಗಂಗಾವತಿಯಲ್ಲಿ ತಹ್ಫೀಝುಲ್ ಖುರ್‌ಆನ್ ಉದ್ಘಾಟನೆ

ಗಂಗಾವತಿ : ಮಸ್‌ದರ್ ಎಜ್ಯು ಆಂಡ್ ಚಾರಿಟಿ ವತಿಯಿಂದ ಗಂಗಾವತಿಯ ಇಲಾಹಿ ಕಾಲೊನಿಯಲ್ಲಿರುವ ಮಸ್ಜಿದೇ ಅಶ್ರಫುಲ್ ಫುಖಹಾ ದಲ್ಲಿ ಮಸ್‌ದರ್ ತಹ್ಫೀಝುಲ್ ಖುರ್‌ಆನ್ ಸಂಸ್ಥೆಯನ್ನು ಉದ್ಘಾಟನೆ ಮಾಡಲಾಯಿತು.ಸಂಸ್ಥೆಯ ಕಾರ್ಯಾಧ್ಯಕ್ಷ ಮೌಲಾನಾ ಅಬೂ ಸುಫ್ಯಾನ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಸಯ್ಯಿದ್ ಆತಿಫ್ ಅಬ್ರಾರ್ ಅಲ್ ಅಝ್ಹರಿ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸೂರತುಲ್ ಫಾತಿಹಾ ಓದಿ ಕೊಡುವ ಮೂಲಕ ತಹ್ಫೀಝುಲ್ ಖುರ್‌ಆನಿಗೆ‌ ಚಾಲನೆ ನೀಡಿದರು.ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಲಾಲ್ ಮುಈನಿ ಅಮ್ಜದಿ ಹಾಗೂ ಅಬ್ದುಸ್ಸಮದ್ ರವರ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಿತು.ಮೌಲಾನಾ ಉವೈಸ್ ಮಂಝರಿ ಹುಬ್ಬಳ್ಳಿ, ನವಾಝ್ ಹಾಜಿ ಬಳ್ಳಾರಿ, ಹುಸೈನ್ ಸಾಹೇಬ್ ತುಂಗಭದ್ರಾ, ದಾದಾಪೀರ್ ಸಾಹೇಬ್ ಬಳ್ಳಾರಿ, ಮೆಹಬೂಬ್ ಎಂಡಿಎಸ್ ಸಿದ್ದಾಪುರ, ನೂರುದ್ದೀನ್ ರಝ್ವಿ ಗಂಗಾವತಿ, ಆರಿಫ್ ಸಿದ್ದಾಪುರ, ಸಿದ್ದೀಕ್ ಸಖಾಫಿ ಮಂಗಳೂರು, ಸಿನಾನ್ ಸಖಾಫಿ ಕಾಟಿಪಳ್ಳ, ಜಿಎಂ ಶಫೀಕ್ ಸಖಾಫಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com