janadhvani

Kannada Online News Paper

ಬೋಟು ದುರಂತ: ಮೀನುಗಾರರು ಮೃತ್ಯು- ಮುಸ್ಲಿಂ ಒಕ್ಕೂಟ ಸಂತಾಪ

ಮಂಗಳೂರು: ಇಲ್ಲಿನ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಪರ್ಷಿಯನ್ ಬೋಟು ಆಳ ಸಮುದ್ರದಲ್ಲಿ ಮುಳುಗಿ ನಡೆದ ದುರಂತದಲ್ಲಿ ಆರು ಮೀನುಗಾರರು ಮೃತಪಟ್ಟ ಘಟನೆ ತೀವ್ರ ದುಃಖಕರ ಹಾಗೂ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇವೆ.

ಪ್ರಸ್ತುತ ಮೂರು ಮೃತ ದೇಹಗಳನ್ನು ಹುಡುಕಿ ಹೊರತೆಗೆಯಲಾಗಿದ್ದು, ಇನ್ನೂ ಮೂರು ಮೃತ ದೇಹಗಳು ಲಭ್ಯವಾಗಲು ಬಾಕಿ ಇದೆ.ಲಭ್ಯವಾಗದ ಮೃತ ದೇಹಗಳನ್ನು ರಕ್ಷಣಾ ಸಿಬ್ಬಂದಿ ಮತ್ತು ಇತರ ಈಜುಗಾರರು ಶೀಘ್ರವೇ ಪತ್ತೆ ಹಚ್ಚುವಂತಾಗಲಿ. ಕುಟುಂಬಕ್ಕೆ ಮೃತರ ಅಗಲಿಕೆಯ ನೋವನ್ನು ತಾಳುವ ಮತ್ತು ತಾಳ್ಮೆಯನ್ನು ದೇವನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇವೆ.

ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.

error: Content is protected !! Not allowed copy content from janadhvani.com