ಹೂವಿನ ಹಡಗಲಿ: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ರಾಜ್ಯ ನಾಯಕರ ಜಿಲ್ಲಾ ಭೇಟಿ VOYAGE ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯಲ್ಲಿ ಸಮಾರೋಪ ಗೊಂಡಿತು.
ಎಸ್ಸೆಸ್ಸೆಫ್ ರಾಜ್ಯ ಪ್ರಭಾರ ಅಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ನಾಯಕ, ಹೂವಿನ ಹಡಗಲಿ ಪುರಸಭೆಯ ನೂತನ ಅಧ್ಯಕ್ಷ, ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷ ವಾರದ ಗೌಸ್ ಮೊಹಿದ್ದೀನ್ ಸಾಹೇಬ್ ಉದ್ಘಾಟಿಸಿದರು.
ಎಸ್ಸೆಸ್ಸೆಫ್ ಹಾಗೂ ಮುಸ್ಲಿಂ ಜಮಾಅತ್ ರಾಜ್ಯದಲ್ಲಿ ನಡೆಸುತ್ತಿರುವ ಕಾರ್ಯಾಚರಣೆಯನ್ನು ಶ್ಲಾಘಿಸಿದ ವಾರದ ಗೌಸ್ ರವರು ಈ ಸಂಘಟನೆಯನ್ನು ಪ್ರತಿ ಹಳ್ಳಿ ಗಲ್ಲಿಗಳಲ್ಲಿ ಕಟ್ಟಿ ಬೆಳೆಸಬೇಕಾಗಿದೆ ಎಂದರು.
ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಡಗು, ಕೋಶಾಧಿಕಾರಿ ರವೂಫ್ ಖಾನ್ ಕುಂದಾಪುರ, ಕಾರ್ಯದರ್ಶಿ ಮುಸ್ತಫಾ ನಈಮಿ ಹಾವೇರಿ, ರಫೀಕ್ ಮಾಸ್ಟರ್ ಕೊಡಗು , ಹೂವಿನ ಹಡಗಲಿಯ ಶೈಖ್ ಅಹ್ಮದ್ ಸಾರ್ ಹಾಗೂ ಸಫ್ವಾನ್ ಜೌಹರಿ ಮಾತನಾಡಿದರು.
ರಾಜ್ಯ ನಾಯಕರಾದ ಮುಬಶ್ಶಿರ್ ಅಹ್ಸನಿ, ಅಶ್ರಫ್ ಅಮ್ಜದಿ ಉಡುಪಿ, ಶರೀಫ್ ಕೊಡಗು, ಸಫ್ವಾನ್ ಚಿಕ್ಕಮಗಳೂರು, ಮುನೀರ್ ಮದನಿ ಮೈಸೂರು, ಕಬೀರ್ ಅಮ್ಜದಿ, ಸಿದ್ದೀಕ್ ಸಖಾಫಿ, ಇಸ್ಹಾಖ್ ಸಖಾಫಿ ಹಾಗೂ ಅಬೂಬಕರ್ ಸಖಾಫಿ ಉಪಸ್ಥಿತರಿದ್ದರು.