janadhvani

Kannada Online News Paper

ಕೆಸಿಎಫ್ ದುಬೈ ನೊರ್ತ್ ಝೋನ್: ಅ. 23ಕ್ಕೆ ಬೃಹತ್ ಮೀಲಾದ್ ಸಮಾವೇಶ

ದುಬೈ: ಅನಿವಾಸಿ ಸಂಘಟನೆಯಾದ KCF ದುಬೈ ನೊರ್ತ್ ಝೋನ್ ವತಿಯಿಂದ ಬ್ರಹತ್ ಮೀಲಾದ್ ಸಮಾವೇಶ ಅಕ್ಟೊಬರ್ 23 ರಂದು ಶುಕ್ರವಾರ ಮದ್ಯಾಹ್ನ 1 ಘಂಟೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಮೌಲಿದ್ ಹಾಗೂ ಬುರ್ದಾ ಆಲಾಪನೆ, ಸನ್ಮಾನ ಸಮಾರಂಭ, ಬಾಷಣ ನಡೆಯಲಿದೆ.

ಕಾರ್ಯಕ್ರಮದಲ್ಲಿ ಪ್ರಾರ್ಥನೆಗೆ ಬಹುಮಾನ್ಯರಾದ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಕಿಲ್ಲೂರು ನೇತೃತ್ವ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ಚಿಕ್ಕಮಗಳೂರು ಹಾಗು ಹಾಸನ ಖಾಝಿಗಳಾದ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ (ಮಾಣಿ ಉಸ್ತಾದ್) ಭಾಗವಹಿಸಲಿದ್ದಾರೆ. ಪ್ರಭಾಷಣ ಲೋಕದ ದ್ರುವತಾರೆ ನೌಫಲ್ ಸಖಾಫಿ ಕಳಸ ಮುಖ್ಯ ಭಾಷಣ ಮಾಡಲಿದ್ದಾರೆ.

ಸಮಾರಂಭದಲ್ಲಿ ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ. ಶೈಕ್ ಭಾವಾ ಹಾಜಿ ಮಂಗಳೂರು, ಕೋಶಾಧಿಕಾರಿ ಅಬ್ದುಲ್ ಹಮೀದ್ ಸಹದಿ ಈಶ್ವರಮಂಗಲ, KCF ಯು ಎ ಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿ, ಪ್ರದಾನ ಕಾರ್ಯದರ್ಶಿ ಮೂಸಾ ಹಾಜಿ ಬಸರ, ಕೋಶಾಧಿಕಾರಿ ಇಬ್ರಾಹಿಂ ಬ್ರೈಟ್ ಮಾರ್ಬಲ್, ಅಶ್ರಫ್ ಹಾಜಿ ಅಡ್ಯಾರ್, ಅಬೂಬಕರ್ ಹಾಜಿ ಕೊಟ್ಟಮುಡಿ, ಅಬ್ದುಲ್ ರಝಾಕ್ ಹಾಜಿ ಕಾಂತಡ್ಕ ಸೇರಿದಂತೆ ಹಲವಾರು ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕರಿಸಬೇಕಾಗಿ ಮೀಲಾದ್ ಸ್ವಾಗತ ಸಮಿತಿ ಅಧ್ಯಕ್ಷರಾದ ಖಾದರ್ ಸಾಲೆತ್ತೂರು ಮತ್ತು ರಾಶಿದ್ ಕುಂಬ್ರ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

error: Content is protected !! Not allowed copy content from janadhvani.com