ಮಂಗಳೂರು,ಅ.17: ಇಂದು (ಶನಿವಾರ ಅಸ್ತ ಆದಿತ್ಯವಾರ)ರಾತ್ರಿ ರಬೀಉಲ್ ಅವ್ವಲ್ ತಿಂಗಳ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಅಕ್ಟೋಬರ್ 29 ರ ಗುರುವಾರದಂದು ಈದ್ ಮಿಲಾದ್ ಆಚರಣೆ ಆಗಿರುತ್ತದೆ ಎಂದು ದ.ಕ ಜಿಲ್ಲಾ ಸಂಯುಕ್ತ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬಖಾರಿ ಕೂರತ್ ಘೋಷಿಸಿದ್ದಾರೆ.
ಅಕ್ಟೋಬರ್ 29 ಗುರುವಾರದಂದು ರಬೀಉಲ್ ಅವ್ವಲ್ ಹನ್ನೆರಡನೇ ದಿನವಾಗಿರುತ್ತದೆ ಆ ದಿನ ಮಿಲಾದುನ್ನಬಿ ಆಚರಿಸುವಂತೆ ಉಡುಪಿ ,ಚಿಕ್ಕಮಗಳೂರು , ಶಿವಮೊಗ್ಗ,ಹಾಸನ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಘೋಷಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.