janadhvani

Kannada Online News Paper

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಡಬ ತಾಲೂಕು ಸಮಿತಿ ಚುನಾವಣಾ ಪೂರ್ವಭಾವಿ ಸಭೆ

ಕಡಬ: ಸೆ.11 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಡಬ ತಾಲೂಕು ಸಮಿತಿ ವತಿಯಿಂದ ಮುಂಬರುವ ಗ್ರಾಮ ಪಂಚಾಯತ್ ಚುನಾವಣಾ ಪೂರ್ವ ತಯಾರಿಯ ಬಗ್ಗೆ ಸಭೆ ನಡೆಸಲಾಯಿತು.

ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಎಲ್ಲಾ ಬ್ರಾಂಚ್ ಮತ್ತು ವಾರ್ಡ್‌ಗಳಲ್ಲಿ ಎಸ್‌ಡಿಪಿಐ ಪಕ್ಷವು ಕಾರ್ಯತಂತ್ರಗಳನ್ನು ರೂಪಿಸುವ ಬಗ್ಗೆ ಸುಧೀರ್ಘ ಚರ್ಚೆ ನಡೆಸಿ ನೆಲ್ಯಾಡಿ,ಕಡಬ,ಆತೂರು ಸೇರಿದಂತೆ ಸುಮಾರು ಹತ್ತು ಪಂಚಾಯತ್ ಗಳಲ್ಲಿ ಚುನಾವಣೆಯಲ್ಲಿ ಸ್ಪರ್ದಿಸುವುದು ಎಂದು ತೀರ್ಮಾನಿಸಲಾಯಿತು. ಕಳೆದ ಸಭೆಯ ನಂತರದ ಎಲ್ಲಾ ಬ್ರಾಂಚ್ ಮಟ್ಟದ ಕಾರ್ಯರೂಪದ ಬಗ್ಗೆ ವರದಿ ಪಡೆದು, ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯತಂತ್ರದ ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು.

ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಕಡಬ ತಾಲೂಕು ಸಮಿತಿ ಅಧ್ಯಕ್ಷರಾದ ರಮ್ಲಾ ಸನ್ ರೈಸ್, ಕಡಬ ತಾಲೂಕು ಎಸ್ ಡಿ ಪಿ ಐ ಚುನಾವಣೆ ಉಸ್ತುವಾರಿ ಹಮೀದ್ ಮೆಜೆಸ್ಟಿಕ್, ಕಡಬ ತಾಲೂಕು ಸಮಿತಿ ಕಾರ್ಯದರ್ಶಿ ರಫೀಕ್ ಬೈಲು, ಕಡಬ ತಾಲೂಕು ಸಮಿತಿ ಸದಸ್ಯರು ಹಾಗೂ ನೆಲ್ಯಾಡಿ, ಕಡಬ, ಕೌಕ್ರಾಡಿ, ಆತೂರು ಎಲ್ಲಾ ಬ್ರಾಂಚಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com