janadhvani

Kannada Online News Paper

ಅಪೇಕ್ಷೆಗೆ ಸ್ಪಂದಿಸಿ ಜನಸ್ನೇಹಿ ಸೇವನೆಗೆ ಮಾದರಿಯಾದ SKSSF ವಳಚ್ಚಿಲ್ ಪದವು ಶಾಖೆ

ಮಂಗಳೂರು: SKSSF ವಳಚ್ಚಿಲ್ ಪದವು ಯುನಿಟ್ ವತಿಯಿಂದ ಆಯುಷ್ಮಾನ್ ಅರೋಗ್ಯ ಕಾರ್ಡ್, ರೇಷನ್ ಕಾರ್ಡ್ ತಿದ್ದುಪಡಿ, ಕಿಶಾನ್ ಸಮ್ಮಾನ್ ಯೋಜನೆ, ಆಧಾರ್ ಕಾರ್ಡ್ ತಿದ್ದುಪಡಿ, ಹಿರಿಯ ನಾಗರಿಕರ ಗುರುತಿನ ಚೀಟಿ, ಪಾನ್ ಕಾರ್ಡ್ ಮೊದಲಾದ ಸೇವಾ ಕಾರ್ಯಕ್ರಮ ಯಶಸ್ವಿಯಾಗಿ ವಳಚ್ಚಿಲ್ ಪದವು ಮಲಾರ್ನಲ್ಲಿ ನಡೆಯಿತು.

ವಳಚ್ಚಿಲ್ ಪದವು ಅಲ್ ಬದ್ರಿಯಾ ಜುಮ್ಮಾ ಮಸೀದಿ ಖತೀಬ್ ಉಸ್ತಾದ್ ಮುತ್ತಲೀಬ್ ಝುಹ್ರಿ ಯವರು ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಅಲ್ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಸಬೀರ್ ವಳಚ್ಚಿಲ್ ಪದವು,SKSSF ಅಡ್ಯಾರ್ ಕಣ್ಣೂರ್ ಕ್ಲಸ್ಟರ್ ಅಧ್ಯಕ್ಷ ನಝೀರ್ ವಳಚ್ಚಿಲ್ ಪದವು,SKSSF ವಳಚ್ಚಿಲ್ ಶಾಖಾ ಅಧ್ಯಕ್ಷ ದಾವೂದ್ ಐಫಾ,SKSSF ವಿಖಾಯ ಅಡ್ಯಾರ್ ಕಣ್ಣೂರ್ ಕ್ಲಸ್ಟರ್ ಅಧ್ಯಕ್ಷ ಶಮೀರ್ ಶಾನ್,SKSSF ವಳಚ್ಚಿಲ್ ಪದವು ಅಧ್ಯಕ್ಷ ರಫೀಕ್ ಗೂಡಿನಬಳಿ, ಉಪಾಧ್ಯಕ್ಷ ಫಾರೂಕ್ ಡಿ SKSSF ವಳಚ್ಚಿಲ್ ಪದವು ಪ್ರದಾನ ಕಾರ್ಯದರ್ಶಿ ಸಿನಾನ್ ದಾರಿಮಿ,ಸಂಘಟನಾ ಕಾರ್ಯದರ್ಶಿ ಫರಾಝ್ ಸಾದಿಕ್ ಸಾಹೇಬ್,ಅನೀಸ್ ಮೊದಲಾದವರು ಪಾಲ್ಗೊಂಡರು.

error: Content is protected !! Not allowed copy content from janadhvani.com