ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್.ವೈ.ಎಸ್) ಹಾಗೂ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಇದರ ಸಂಪ್ಯ ಶಾಖೆಯ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವು ಯೋಜನೆಗಳು ಹಾಗೂ ಆರೋಗ್ಯ ಇಲಾಖೆಯ ಉಚಿತ ಚಿಕಿತ್ಸೆಯ ನೋಂದಣಿ ಅಭಿಯಾನ ಹಾಗೂ ಕಾರ್ಡು ವಿತರಣಾ ಕಾರ್ಯಕ್ರಮವು ಸಂಪ್ಯ ಎಸ್ಸೆಸ್ಸೆಫ್ ಕಛೇರಿಯಲ್ಲಿ ಇತ್ತೀಚೆಗೆ ನಡೆಯಿತು.
ಪಿ. ಎಂ. ಕಿಸಾನ್ ಯೋಜನೆ, ಹಿರಿಯ ನಾಗರಿಕ ಕಾರ್ಡ್ ಹಾಗೂ ಆಯುಷ್ಮಾನ್ ಕಾರ್ಡ್ ಹೀಗೆ ಹಲವು ಯೋಜನೆಗಳ ನೋಂದಣಿ ಹಾಗೂ ಕಾರ್ಡು ವಿತರಣೆ ಮಾಡಲಾಯಿತು. ಎಸ್.ವೈ.ಎಸ್. ಬ್ರಾಂಚ್ ಅಧ್ಯಕ್ಷರಾದ ಇಬ್ರಾಹಿಂ ವಾಗ್ಲೆ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಎಸ್ಸೆಸ್ಸೆಫ್ ರಾಜ್ಯ ಸದಸ್ಯರಾದ ಕೊಂಬಾಳಿ ಕೆ.ಎಂ.ಎಚ್ ಝುಹುರಿ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭಹಾರೈಸಿದರು.
ಪ್ರಸ್ತುತ ಸಮಾರಂಭದಲ್ಲಿ ಎಸ್. ವೈ. ಎಸ್. ಬ್ರಾಂಚ್ ನಿಕಟಪೂರ್ವ ಅಧ್ಯಕ್ಷರಾದ ಎಸ್. ಅಬೂಬಕರ್, ಆರ್ಯಾಪು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಅಬ್ದುಲ್ ಜಬ್ಬಾರ್, ಎಸ್ಸೆಸ್ಸೆಫ್ ಬ್ಲಡ್ ಸೈಬೋ ದ. ಕ. ಕೋರ್ಡಿನೇಟರ್ ಕರೀಂ ಕದ್ಕಾರು, ಎಸ್.ವೈ.ಎಸ್. ಜಿಲ್ಲಾ ಟೀಂ ಇಸಾಬ ನಾಯಕರಾದ ಇಖ್ಬಾಲ್ ಬಪ್ಪಳಿಗೆ, ಪುತ್ತೂರು ಸೆಂಟರ್ ಪ್ರ. ಕಾರ್ಯದರ್ಶಿಯಾದ ಸ್ವಾಲಿಹ್ ಮುರ, ಸೆಂಟರ್ ಟೀಂ ಇಸಾಬ ನಾಯಕರಾದ ಶಾಹುಲ್ ಹಮೀದ್ ಕಬಕ, ಸದಸ್ಯರಾದ ರಫೀಖ್ ಸಖಾಫಿ ಕೆಮ್ಮಾಯಿ, ಅಬ್ದುಲ್ ಅಝೀಝ್ ಕೆಮ್ಮಾಯಿ, ಎಸ್ಸೆಸ್ಸೆಫ್ ಬ್ಲಡ್ ಸೈಬೋ ಝೋನ್ ಉಸ್ತುವಾರಿಯಾದ ಇಮ್ರಾನ್ ರೆಂಜಲಾಡಿ, ಡಿವಿಷನ್ ಉಸ್ತುವಾರಿಯಾದ ಹಾರಿಸ್ ಅಡ್ಕ, ಬ್ರಾಂಚ್ ಕೋಶಾಧಿಕಾರಿ ಅಶ್ರಫ್ ಕಲ್ಲರ್ಪೆ, ಎಸ್ಸೆಸ್ಸೆಫ್ ಶಾಖಾ ಪ್ರ. ಕಾರ್ಯದರ್ಶಿ ರಾಝಿಖ್ ಕಲ್ಲರ್ಪೆ, ಕೆ.ಸಿ.ಎಫ್. ಕಾರ್ಯಕರ್ತ ಹಮೀದ್ (ಅಮ್ಮಿ) ವಾಗ್ಲೆ, ಎಸ್ಸೆಸ್ಸೆಫ್ ಕಾರ್ಯಕರ್ತರಾದ ಬಿ.ಕೆ. ಕಾಮಿಲ್ ಮದನಿ, ಪುತ್ತು ವಾಗ್ಲೆ ರಶೀದ್ (ಮುನ್ನಿ) ಹಾಗೂ ಸೆಕ್ಟರ್, ಶಾಖಾ ನಾಯಕರು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಶಾಖಾ ಉಪಾಧ್ಯಕ್ಷರಾದ ಬಿ.ಕೆ. ಯಾಸೀನ್ ಅಹ್ಸನಿ, ಅಲ್-ಹಿಮಮಿ ಸ್ವಾಗತಿಸಿ, ಎಸ್.ವೈ.ಎಸ್. ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಝೀಝ್ ಕಲ್ಲರ್ಪೆ ವಂತಿಸಿದರು. ಹಂಝ ಸಂಪ್ಯ ಕಾರ್ಯಕ್ರಮ ನಿರೂಪಿಸಿದರು.