ಧಾರ್ಮಿಕ, ಸಾಮಾಜಿಕ ರಂಗದ ಮುಂಚೂಣಿ ನಾಯಕ, ಸುನ್ನತ್ ಜಮಾಅತ್ತಿನ ಆದರ್ಶ ದೀರ ಸಂಘಟಕ, ಸಮುದಾಯ ಸ್ನೇಹಿ, ಉಲಮಾಗಳು ಮತ್ತು ಸಯ್ಯಿದ್ ಗಳೊಂದಿಗೆ ಅಗಾಧ ಒಡನಾಟ ಹೊಂದಿದ್ದ ಜಾರಿಗೆಬೈಲು ಜಮಾಅತ್ ಅಧ್ಯಕ್ಷರಾದ ಅಬ್ಬೊನು ಶಾಫಿ ಪಳ್ಳಾದೆ ಯವರ ನಿಧನ ವಾರ್ತೆ ಕೇಳಿ ಅತೀವ ದು:ಖವಾಯಿತು.ಅವರ ಅಗಲಿಕೆ ಸುನ್ನೀ ಸಂಘ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ.ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸುತ್ತೇನೆ.
ಮೃತರ ಹೆಸರಲ್ಲಿ ಸಾಧ್ಯವಾದಷ್ಟು ಕುರ್ಆನ್ ಪಾರಾಯಣ ಹಾಗೂ ತಹ್ಲೀಲ್ ಹೇಳಿ ಹದ್’ಯಾ ಮಾಡಿ ಅವರ ಮಗ್ಫಿರತ್ ಮರ್ಹಮತ್ತಿಗಾಗಿ ಪ್ರಾರ್ಥಿಸಬೇಕಾಗಿಯೂ,ಮಯ್ಯಿತ್ ನಮಾಜ್ ನಿರ್ವಹಿಸ ಬೇಕಾಗಿಯೂ ಈ ಮೂಲಕ ವಿನಂತಿ.
ಅಲ್ಲಾಹು ಅವರಿಗೆ ಮಗ್ಫಿರತ್ ನೀಡಲಿ. ಅವರು ದೀನಿಗಾಗಿ ಮಾಡಿದ ಕಾರ್ಯ ಚಟುವಟಿಕೆ ಮತ್ತು ತ್ಯಾಗ ವನ್ನು ಅಲ್ಲಾಹು ಸ್ವೀಕರಿಸಿ ಅನುಗ್ರಹಿಸಲಿ. ಆಮೀನ್
ಆತೂರ್ ಸಅದ್ ಮುಸ್ಲಿಯಾರ್
ಅಧ್ಯಕ್ಷರು, ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ ರಾಜ್ಯ ಸಮಿತಿ.