janadhvani

Kannada Online News Paper

ಅನ್ಯಧರ್ಮದ ಕೋವಿಡ್ ಸೋಂಕಿತರ ಶವ ಸಂಸ್ಕಾರಕ್ಕೆ ಸಹಕರಿಸಿ ಮಾನವೀಯತೆ ಮೆರೆದ ಸುನ್ನಿ ಹೆಲ್ಪ್ ಡೆಸ್ಕ್

ಪರ್ಕಳ: ಉಡುಪಿಯ ಪರ್ಕಳದಲ್ಲಿ ಅನ್ಯ ಧರ್ಮದ ಓರ್ವರು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಕೋವಿಡ್ ನಿಂದ ಮೃತರಾಗಿದ್ದರು. ಆದರೆ, ಅವರ ಕುಟುಂಬದವರು ಆ ಶವದ ಅಂತ್ಯ ಸಂಸ್ಕಾರ ನಡೆಸಲು ಮುಂದೆ ಬಂದಿರಲಿಲ್ಲ. ಈ ಸಂದರ್ಭ ಸುನ್ನಿ ಹೆಲ್ಪ್ ಡೆಸ್ಕ್ ಕಾರ್ಯಕರ್ತರು ಆರೋಗ್ಯ ಇಲಾಖೆ ಮತ್ತು ಅಧಿಕಾರಿಗಳ ಅನುಮತಿ ಹಾಗೂ ಆ ಕುಟುಂಬದ ಬೇಡಿಕೆಯಂತೆ ಅವರ ಧರ್ಮದ ಪ್ರಕಾರ ಅಂತ್ಯಕ್ರಿಯೆ ನಡೆಸಲು ಇಂದ್ರಾಳಿ ರುದ್ರ ಭೂಮಿ ತನಕ ಆ ಶವ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ಕೊನೆಗೆ ಗೌರವಯುತ ಅಂತ್ಯ ಸಂಸ್ಕಾರ ನಡೆಯುವುದರೊಂದಿಗೆ ಮೃತರ ಕುಟುಂಬ ಸಮಾಧಾನದ ನಿಟ್ಟುಸಿರು ಬಿಡುವಂತಾಯಿತು.

ಈ ಸೇವೆಯಲ್ಲಿ ನೇಜಾರು ಅಬೂಬಕ್ಕರ್ ಹಾಜಿ, ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಹಾಗೂ ರಫೀಕ್ ದೊಡ್ಡಣಗುಡ್ಡೆ , ಖಯ್ಯೂಮ್ ಮಲ್ಪೆ, ಬಿಲಾಲ್ ಮಲ್ಪೆ, ಅಲ್ತಾಫ್ ಮಲ್ಪೆ,ಅಫ್ಜಲ್ ಕರಂಬಳ್ಳಿ, ಬಶೀರ್ ಕರಂಬಳ್ಳಿ, ನಝೀರ್ ಕರಂಬಳ್ಳಿ ಹಾಗೂ ಆಸಿಫ್ ಮಂಚಿ ಭಾಗಿಯಾದರು.

ಈ ಮಾನವೀಯ ಸೇವಾ ಕೈಂಕರ್ಯಕ್ಕೆ ಅಧಿಕಾರಿ ವರ್ಗ ಹಾಗೂ ಕುಟುಂಬಿಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಡೆಸ್ಕ್

ಪರ್ಕಳ: ಉಡುಪಿಯ ಪರ್ಕಳದಲ್ಲಿ ಅನ್ಯ ಧರ್ಮದ ಓರ್ವರು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಕೋವಿಡ್ ನಿಂದ ಮೃತರಾಗಿದ್ದರು. ಆದರೆ, ಅವರ ಕುಟುಂಬದವರು ಆ ಶವದ ಅಂತ್ಯ ಸಂಸ್ಕಾರ ನಡೆಸಲು ಮುಂದೆ ಬಂದಿರಲಿಲ್ಲ. ಈ ಸಂದರ್ಭ ಸುನ್ನಿ ಹೆಲ್ಪ್ ಡೆಸ್ಕ್ ಕಾರ್ಯಕರ್ತರು ಆರೋಗ್ಯ ಇಲಾಖೆ ಮತ್ತು ಅಧಿಕಾರಿಗಳ ಅನುಮತಿ ಹಾಗೂ ಆ ಕುಟುಂಬದ ಬೇಡಿಕೆಯಂತೆ ಅವರ ಧರ್ಮದ ಪ್ರಕಾರ ಅಂತ್ಯಕ್ರಿಯೆ ನಡೆಸಲು ಇಂದ್ರಾಳಿ ರುದ್ರ ಭೂಮಿ ತನಕ ಆ ಶವ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ಕೊನೆಗೆ ಗೌರವಯುತ ಅಂತ್ಯ ಸಂಸ್ಕಾರ ನಡೆಯುವುದರೊಂದಿಗೆ ಮೃತರ ಕುಟುಂಬ ಸಮಾಧಾನದ ನಿಟ್ಟುಸಿರು ಬಿಡುವಂತಾಯಿತು.

ಈ ಸೇವೆಯಲ್ಲಿ ನೇಜಾರು ಅಬೂಬಕ್ಕರ್ ಹಾಜಿ, ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಹಾಗೂ ರಫೀಕ್ ದೊಡ್ಡಣಗುಡ್ಡೆ , ಖಯ್ಯೂಮ್ ಮಲ್ಪೆ, ಬಿಲಾಲ್ ಮಲ್ಪೆ, ಅಲ್ತಾಫ್ ಮಲ್ಪೆ,ಅಫ್ಜಲ್ ಕರಂಬಳ್ಳಿ, ಬಶೀರ್ ಕರಂಬಳ್ಳಿ, ನಝೀರ್ ಕರಂಬಳ್ಳಿ ಹಾಗೂ ಆಸಿಫ್ ಮಂಚಿ ಭಾಗಿಯಾದರು.

ಈ ಮಾನವೀಯ ಸೇವಾ ಕೈಂಕರ್ಯಕ್ಕೆ ಅಧಿಕಾರಿ ವರ್ಗ ಹಾಗೂ ಕುಟುಂಬಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

error: Content is protected !! Not allowed copy content from janadhvani.com