janadhvani

Kannada Online News Paper

SჄS ಪರಂಗಿಪೇಟೆ ವತಿಯಿಂದ ಅಲ್ ಉಸ್ರತುತ್ತಯ್ಯಿಬ ಕಾರ್ಯಕ್ರಮ

SჄS ಪರಂಗಿಪೇಟೆ ವತಿಯಿಂದ SჄS ಬ್ರಾಂಚ್ ವ್ಯಾಪ್ತಿಯ ಮನೆಗಳಲ್ಲಿ ತಿಂಗಳಿಗೊಮ್ಮೆ ನಡೆಸುವ ಅಲ್ ಉಸ್ರತುತ್ತಯ್ಯಿಬ
ಸಂತುಷ್ಟ ಕುಟುಂಬ ಎಂಬ ಕಾರ್ಯಕ್ರಮದ ಅನುಷ್ಠಾನದ ಕುರಿತ ಸಭೆಯು ಸುನ್ನೀ ಸೆಂಟರ್ ತುಂಬೆಯಲ್ಲಿ ಜರುಗಿತ್ತು.

ತಿಳಿದುಕೊಳ್ಳಲೇಬೇಕಾದ ನಿರ್ದಿಷ್ಟ ವಿಷಯಗಳ ಮಾಹಿತಿಯನ್ನೊಳಗೊಂಡ ಅಲ್ ಉಸ್ರತುತ್ತಯ್ಯಿಬ
ಪ್ರತಿಯೊಂದು ಮನೆ ಮಂದಿ ನಿಗದಿತ ಸಮಯದಲ್ಲಿ ಸೇರಿಕೊಂಡು ನಡೆಸಬೇಕಾದ ಕಾರ್ಯಕ್ರಮ ಇದಾಗಿದೆ.
ಇದರೊಂದಿಗೆ ಪ್ರತಿ ಮನೆಗಳ‌ ಮೂಲಕ ಸುನ್ನತ್ ಜಮಾಅತ್ ನ ಆದರ್ಶಗಳನ್ನು ಪ್ರಚಾರಪಡಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು SჄS ಸೆಂಟರ್ ಅಧ್ಯಕ್ಷ ಅಬ್ದು ಲ್ಲತೀಫ್ ಮುಸ್ಲಿಯಾರ್ ವಹಿಸಿದರು.
ಕಾರ್ಯಕ್ರಮವನ್ನು SYS
ದಅವಾ ಮತ್ತು ಶಿಕ್ಷಣ ರಾಜ್ಯ ಸಮಿತಿ ಸದಸ್ಯರಾದ ವಿ.ಎ. ಮುಹಮ್ಮದ್ ಸಖಾಫಿ ವಳವೂರು ಉದ್ಘಾಟಿಸಿದರು. ಪ್ರ. ಕಾರ್ಯದರ್ಶಿ ವಿ.ಎ. ಯೂಸುಫ್ ಸಿದ್ದೀಖ್ ಸಖಾಫಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

error: Content is protected !! Not allowed copy content from janadhvani.com