ಎಸ್ಸೆಸ್ಸಫ್ ಕುಂಬ್ರ ಸೆಕ್ಟರ್ ವತಿಯಿಂದ ಎಸ್ ವೈಎಸ್, ಎಸ್ಸೆಸ್ಸೆಫ್ ಚೆನ್ನಾರ್ ಶಾಖೆ ಯ ಆಶ್ರಯದಲ್ಲಿ ರೆಡ್ ಕ್ರಾಸ್ ಸೊಸೈಟಿ ಹಾಗೂ ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದಿಂದ
ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದರೂ ಅದರ ನಡುವೆಯೂ ಜಿಲ್ಲೆಯಲ್ಲಿ ರಕ್ತದ ಅಭಾವ ಸೃಷ್ಟಿಯಾಗಿರುವುದರಿಂದ ಎಸ್ಸೆಸ್ಸಫ್ ಬ್ಲಡ್ ಸೈಬೋ ಇದರ 165 ನೇ ಯಶಸ್ವೀ ರಕ್ತದಾನ ಶಿಬಿರ ನಡೆಯಿತು.
ಚೆನ್ನಾವರ ಸ.ಕಿ.ಪ್ರಾ ಶಾಲೆಯಲ್ಲಿ ನಡೆದ ಶಿಬಿರದಲ್ಲಿ 60 ದಾನಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
ಪ್ರಸ್ತುತ ರಕ್ತದಾನ ಶಿಬಿರದಲ್ಲಿ ಚೆನ್ನಾವರ ಜುಮ್ಮಾ ಮಸ್ಜಿದ್ ಇದರ ಗೌರವಾನ್ವಿತ ಅಧ್ಯಕ್ಷ ಅಬ್ದುಲ್ ಕರೀಮ್ ಹಾಜಿಯವರು ಅಧ್ಯಕ್ಷತೆ ವಹಿಸಿದ್ದರು. ಸಿಪಿ ಅಬೂಬಕರ್ ಮದನಿಯವರು ಉದ್ಘಾಟಿಸಿದರು.
ಅಲ್ ಹಾಫಿಳ್ ಅಬ್ದುಸ್ಸಲಾಮ್ ನಿಝಾಮಿ, ಎಸ್ಸೆಸ್ಸೆಫ್ ದ.ಕ ಜಿಲ್ಲಾ ನಾಯಕ ಫೈಸಲ್ ಝುಹ್ರಿ, ಬ್ಲಡ್ ಸೈಬೋ ಜಿಲ್ಲಾ ಸಂಚಾಲಕ ಕರೀಮ್ ಕೆದ್ಕಾರ್ , ಪುತ್ತೂರು ಡಿವಿಷನ್ ಉಸ್ತುವಾರಿ ಹಾರಿಸ್ ಅಡ್ಕ ರವರು ಸಂದೇಶ ಭಾಷಣ ಮಾಡಿದರು. ಪಾಲ್ತಾಡ್ ನ್ಯೂ ಬ್ರದರ್ಸ್ ಇದರ ಅಧ್ಯಕ್ಷ ಹನೀಫ್ ಕುಂಡಡ್ಕ, ಬಾಲಕೃಷ್ಣ ರೈ ಚೆನ್ನಾವರ, ಶಾಲಾ ಮುಖ್ಯ ಶಿಕ್ಷಕಿ ಶಾಂತ ಕುಮಾರಿ ಮೊದಲಾದವರು ಸಾಂದರ್ಬಿಕವಾಗಿ ಮಾತನಾಡಿದರು.
ಪ್ರಸ್ತುತ ಶಿಬಿರದಲ್ಲಿ ಸಿಪಿ ಮುಹಮ್ಮದ್ ಹಾಜಿ, ಮುಹಮ್ಮದ್ ರಿಯಾಝ್ ಚೆನ್ನಾವರ, ಮಂಗಳೂರು ಬ್ಲಡ್ ಡೋನರ್ಸ್ ಸಂಯೋಜಕ ಅಬ್ದುಲ್ ರೌಫ್ ಪಾಲ್ತಾಡ್, ಬ್ಲಡ್ ಸೈಬೋ ಉಸ್ತುವಾರಿಗಳಾದ ಸಿದ್ದೀಕ್ ಗೂನಡ್ಕ, ಶಿಹಾಬ್ ಪುತ್ತೂರು, ಇಮ್ರಾನ್ ರೆಂಜಲಾಡಿ, ಹಮೀದ್ ಸಖಾಫಿ ಪಾಣಾಜೆ, ಮುಹ್ಸಿನ್ ಕಟ್ಟತ್ತಾರ್, ಕುಂಬ್ರ ಸೆಕ್ಟರ್ ಅಧ್ಯಕ್ಷ ಶಮೀರ್ ಸಖಾಫಿ, ಎಸ್ ವೈಎಸ್ ಸೆಂಟರ್ ಪ್ರ.ಕಾರ್ಯದರ್ಶಿ ಮುಹಮ್ಮದ್ ಬಾಯಂಬಾಡಿ, ಇಸ್ಮಾಈಲ್ ಸಅದಿ, ಇಲ್ಯಾಸ್ ಕಟ್ಟತ್ತಾರ್, ಸಲೀಮ್ ಬಾಯಂಬಾಡಿ, ಡಾ ರಾಮಚಂದ್ರ ಭಟ್, ಎಸ್ಸೆಸ್ಸೆಫ್ ಝೋನ್ ಕಾರ್ಯದರ್ಶಿ ಶಫೀಕ್ ಮಾಸ್ಟರ್ ತಿಂಗಳಾಡಿ, ಯೂಸುಫ್ ಹಾಜಿ ,ಅಬ್ದುಲ್ ಅಝೀಝ್, ಮುತ್ತಲಿಬ್ ಹಾಜಿ, ಇಕ್ಬಾಲ್ ಮದನಿ, ಅಮೀನ್ ಝುಹ್ರಿ ಸಅದಿ, ಇಸ್ಮಾಈಲ್ ಹನೀಫಿ, ಇಸ್ಮಾಈಲ್ ಸಿಪಿ ಮೊದಲಾದವರು ಉಪಸ್ಥಿತರಿದ್ದರು. ಇಕ್ಬಾಲ್ ಮಾಸ್ಟರ್ ಸ್ವಾಗತಿಸಿ ಅಬ್ದುಲ್ ಬಾಸಿತ್ ವಂದಿಸಿದರು.