janadhvani

Kannada Online News Paper

ಪ್ರವಾಹ: ತುರ್ತು ಸೇವೆಗೆ ರಾಜ್ಯಾದ್ಯಂತ ಎಸ್ಸೆಸ್ಸೆಫ್ ಸಕ್ರೀಯ ತಂಡ

ಬೆಂಗಳೂರು : ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಳ್ಳುತ್ತಿದೆ. ಈಗಾಗಲೇ ಕೊರೋನಾದಿಂದ ತತ್ತರಿಸಿರುವ ಜನರು ಇದರಿಂದಾಗಿ ಭೀತಿಗೊಳಗಾಗಿದ್ದಾರೆ.

ಹಲವೆಡೆಗಳಲ್ಲಿ ಗುಡ್ಡ ಕುಸಿತಗಳು, ಪ್ರವಾಹಗಳು ಉಂಟಾಗಿದ್ದು ಹಲವರು ಮನೆಮಠಗಳನ್ನು ಕಳೆದುಕೊಳ್ಳುತ್ತಿದ್ದಾರೆ.ಅಲ್ಲದೆ ಪಕ್ಕದ ಮಹಾರಾಷ್ಟ್ರದಲ್ಲೂ ಎಡೆಬಿಡದೆ ಮಳೆ ಸುರಿಯುತ್ತಿದ್ದು ರಾಜ್ಯದ ಅಣೆಕಟ್ಟುಗಳು ತುಂಬಿ ತುಳುಕಿ ಭಯದ ವಾತಾವರಣ ನಿರ್ಮಾಣವಾಗಿದೆ.

ಈ ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಸಂತೃಸ್ತರ ನೆರವಿಗಾಗಿ ರಾಜ್ಯ ಎಸ್ಸೆಸ್ಸೆಫ್ ಸಕ್ರೀಯ ತಂಡ ಕ್ಯೂಟೀಂ ಕಾರ್ಯಕರ್ತರು ರಾಜ್ಯದಾದ್ಯಂತ ತಯಾರಾಗಿ ನಿಂತಿದ್ದು ತುರ್ತು ಸಹಾಯಕ್ಕಾಗಿ ಈ ಕೆಳಗಿನ ನಂಬರ್‌ಗಳಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಎಸ್ಸೆಸ್ಸೆಫ್ ಸ್ವಯಂ ಸೇವಕ ತಂಡ ಕ್ಯೂ ಟೀಂ ಚೀಫ್ ಹಾಫಿಝ್ ಸುಫ್ಯಾನ್ ಸಖಾಫಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

  • ಕೊಡಗು : 9481572641, 9611481918
  • ಬೆಳಗಾವಿ : 7090619161, 8722620209
  • ಬಾಗಲಕೋಟೆ : 9008553447
  • ದಕ್ಷಿಣ ಕನ್ನಡ : 9482843426, 9632659290, 9663360112
  • ಚಿಕ್ಕಮಗಳೂರು : 9686322560, 9448608078
  • ಹಾಸನ : 9535658994
  • ಶಿವಮೊಗ್ಗ : 8453204039
  • ಉಡುಪಿ : 9008517775
  • ರಾಯಚೂರು : 8139910392
  • ಉತ್ತರ ಕನ್ನಡ : 9945995804
  • ಹಾವೇರಿ : 8722573398
  • ದಾವಣಗೆರೆ : 9164856627
  • ಗದಗ : 8970411031
  • ಚಿತ್ರದುರ್ಗ : 9035107313
  • ಕೊಪ್ಪಳ : 8139910392
  • ಮೈಸೂರು : 8722078897
  • ಬೆಂಗಳೂರು: 9886231997
  • ರಾಮನಗರ: 7349424987
  • ಬಿಜಾಪುರ : 8951077986
  • ತುಮಕೂರು : 7760457465
  • ಬಳ್ಳಾರಿ : 9741992647
  • ಮಂಡ್ಯ : 9591162781
  • ಧಾರವಾಡ : 9844228313
  • ಗುಲ್ಬರ್ಗ : 9380894300
  • ಇತರ ಜಿಲ್ಲೆಗಳು : 9164630384

error: Content is protected !! Not allowed copy content from janadhvani.com