janadhvani

Kannada Online News Paper

ಕಡಬ- ಅಕ್ರಮ ನಾಡ ಪಿಸ್ತೂಲು ಹೊಂದಿದ್ದ ಜನಾರ್ಧನ ಗೌಡ ಪೊಲೀಸ್ ವಶಕ್ಕೆ

ಕಡಬ: ಇಲ್ಲಿನ ಪಾಲೋಳಿ ನಿವಾಸಿ ಜನಾರ್ಧನ ಗೌಡ ಎಂಬಾತನನ್ನು ಅಕ್ರಮ ಕಂಟ್ರಿಮೇಡ್ ಪಿಸ್ತೂಲು ಮತ್ತು ಸ್ಪೋಟಕಗಳನ್ನು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ ಕಾರಣ ಕಡಬ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಆರೋಪಿಯು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದ 2 ಪಿಸ್ತೂಲು, 3 ತೋಟೆ, ರಂಜಕದ ಪುಡಿ, ಪೊಟ್ಯಾಶ್ ಮತ್ತು ಕೇಪು ಗಳನ್ನು ವಶಪಡಿಸಿಕೊಂಡಿದ್ದು ಆರೋಪಿಯನ್ನು ಬಂಧಿಸಿದ್ದಾರೆ. ಇವನ್ನು ಈತ ದಾಸ್ತಾನು ಇರಿಸಿಕೊಳ್ಳಲು ಕಾರಣವೇನು ಎಂಬುವುದು ವಿಚಾರಣೆಯಿಂದ ತಿಳಿದುಬರಬೇಕಿದೆ.

ಗೌರಿ ಲಂಕೇಶ್ ಹತ್ಯೆ ಮಾಡಲು ನಾಡ ಪಿಸ್ತೂಲು ಬಳಕೆಯಾಗಿತ್ತು ಮತ್ತು ಈ ಪ್ರಕರಣದಲ್ಲಿ ಎಸ್ಐಟಿ ಕಡಬಕ್ಕೂ ಬಂದು ವಿಚಾರಣೆ ನಡೆಸಿದ್ದನ್ನು ಸ್ಮರಿಸಿಕೊಳ್ಳಬಹುದು.

error: Content is protected !! Not allowed copy content from janadhvani.com