janadhvani

Kannada Online News Paper

ಉಡುಪಿ: ಕೋವಿಡ್-19 ಸುನ್ನೀ ಹೆಲ್ಪ್ ಡೆಸ್ಕ್ ನಿಂದ ಆರನೇ ದಫನ ಕಾರ್ಯ

ಉಡುಪಿ, ಆ.4: ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಯಲ್ಲಿ ನಿನ್ನೆ ಕೊರೋನಾದಿಂದ ಮರಣ ಹೊಂದಿದ ಮೃತ ದೇಹವನ್ನು ಉಡುಪಿ ಖಬರ್ ಸ್ಥಾನದಲ್ಲಿ ದಫನ ಮಾಡಲಾಯಿತು.

ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನೀ ಸಂಯುಕ್ತ ಜಮಾಅತ್, ಎಸ್ ವೈ ಎಸ್, ಎಸ್ಸೆಸ್ಸೆಫ್ ಹಾಗೂ ಎಸ್ ಡಿ ಐ ಉಡುಪಿ ಜಿಲ್ಲಾ ಜಂಟಿ ಸೇವಾ ವಿಭಾಗವಾದ ಕೋವಿಡ್-19 ಸುನ್ನೀ ಹೆಲ್ಪ್ ಡೆಸ್ಕ್ ನ ಆರನೇ ದಫನ ಕಾರ್ಯವಾಗಿದೆ.

ಸರ್ಕಾರದ ಕಾನೂನುಗಳನ್ನು ಪಾಲಿಸುವುದರೊಂದಿಗೆ ಸಂಪೂರ್ಣ ಸುನ್ನೀ ಆದರ್ಶವನ್ನು ಪಾಲಿಸಿ, ಉಲಮಾಗಳ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ನಡೆಸುವ ಈ ತಂಡದ ಸೇವೆಗಳು ಸಾರ್ವತ್ರಿಕ ಮೆಚ್ಚುಗೆಗೆ ಪಾತ್ರವಾಗಿದೆ.

error: Content is protected !! Not allowed copy content from janadhvani.com