ಕೊಡಗಿನ ಅನಿವಾಸಿಗಳ ಹೆಮ್ಮೆಯ ಸಂಘಟನೆಯಾದ ಕೊಡಗು ಸುನ್ನಿ ವೆಲ್ಫೇರ್ ಅಸ್ಸೋಸಿಯೇಷನ್, ಸೌದಿ ಅರೇಬಿಯಾದ ಅಲ್ ಹಸ್ಸಾ ದಮ್ಮಾಂ, ರಿಯಾದ್, ಅಲ್ ರಾಸ್, ಬುರೈದ, ಮದೀನತುಲ್ ಮುನವ್ವರ, ಯಾಂಬೋ, ಜಿದ್ದಾ, ಸ್ಥಳಗಳಲ್ಲಿ ಕಾರ್ಯಾಚರಿಸುತ್ತಿದೆ.
ಇದೀಗ ಮಕ್ಕತ್ತುಲ್ ಮುಕರ್ರಮದಲ್ಲಿ ನೂತನ ವಲಯ ರಚನೆ , ಜಲೈ 16 ರಂದು KSWA ಸೌದಿ ಅರೇಬಿಯಾ ರಾಷ್ಟ್ರೀಯ ಕೋಶಾಧಿಕಾರಿ ಹಂಝ ಉಸ್ತಾದ್ ಚೋಕಂಡಳ್ಳಿ ಅವರ ಪ್ರಾರ್ಥನೆಯೊಂದಿಗೆ ರಾಷ್ಟ್ರೀಯ ಸಲಹಾ ಸಮಿತಿ ಚೆಯರ್ಮೇನ್ ಅಸ್ಸಯ್ಯದ್ ಅಬ್ದುಲ್ ಖಾದರ್ ಅಲ್ ಬುಖಾರಿ ಅಯ್ಯಂಗೇರಿ ಅವರ ಅಧ್ಯಕ್ಷತೆಯಲ್ಲಿ ಆನ್ಲೈನ್ ಸಭೆ ನಡೆಯಲಾಯಿತು.
ಸಭೆಯನ್ನು ರಾಷ್ಟ್ರೀಯಧ್ಯಕ್ಷರಾದ ಸಿದ್ದೀಖ್ ಝುಹ್ರಿ ಉದ್ಘಾಟಿಸಿದರು, ಕೊಡಗು ಸುನ್ನಿ ವೆಲ್ಫೇರ್ ಅಸ್ಸೋಸಿಯೇಷನ್ ಜಿಸಿಸಿ ಮತ್ತು ಸೌದಿ ಅರೇಬಿಯ ಪ್ರಧಾನ ಕಾರ್ಯದರ್ಶಿ ಆಬಿದ್ ಕಂಡಕ್ಕರೆ ವಿಷಯ ಮಂಡಿಸಿ ನೂತನ ಸಾರಥಿಗಳನ್ನು ಆಯ್ಕೆಮಾಡಲಾಯಿತು.
ಅಧ್ಯಕ್ಷರಾಗಿ ಡಾಕ್ಟರ್: ಫಹೀಂ ಕೊಟ್ಟಮುಡಿ, ಪ್ರಧಾನ ಕಾರ್ಯದರ್ಶಿಯಾಗಿ ರಫಿಖ್ ಕೊಳಕೇರಿ ಕೋಶಾದಿಕಾರಿ ಯಾಗಿ ಅಬ್ದುಲ್ ಸಲಾಂ ಎಮ್ಮೆಮಾಡು ರಿಲೀಫ್ ಬೋರ್ಡ್ ಚೆಯರ್ಮೇನಾಗಿ ಅಬ್ದುಲ್ ರಝಾಖ್ ಗುಂಡಿಕರೆ ಇವರನ್ನು ಆಯ್ಕೆ ಮಾಡಲಾಯಿತು
ಡಾ. ಫಹೀಂ ಕೊಟ್ಟಮುಡಿ ಮತ್ತು ಅಬ್ದುಲ್ ರಝಾಖ್ ಗುಂಡಿಕರೆ ಶುಭಹಾರೈಸಿ ಮಾತನಾಡಿದರು. ರಫೀಕ್ ಕೊಳಕೇರಿ ಸ್ವಾಗತಿಸಿ ಇಸ್ಹಾಖ್ ಕುಂಜಿಲ ವಂದಿಸಿದರು.