ಪುತ್ತೂರು : ಎಸ್ಸೆಸ್ಸಫ್ ಕ್ಯಾಂಪಸ್ ಪುತ್ತೂರು ಸಮಿತಿ ವತಿಯಿಂದ ವಿಶ್ವ ಪರಿಸರ ದಿನವನ್ನು ಸಸಿ ವಿತರಿಸುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.
“ನಾಳೆಗೊಂದು ನೆರಳು” ಅನ್ನುವ ಘೋಷವಾಕ್ಯದಡಿಯಲ್ಲಿ ಎಸ್ಸೆಸ್ಸಫ್ ಪುತ್ತೂರು ಡಿವಿಶನ್ ವ್ಯಾಪ್ತಿಯ 47 ಯುನಿಟ್ ಗಳ ಕ್ಯಾಂಪಸ್ ಕಾರ್ಯಕರ್ತರಿಗೆ ಸಸಿ ವಿತರಿಸುವುದರ ಮೂಲಕ ವಿಶ್ವ ಪರಿಸರದ ದಿನದ ಸಂದೇಶವನ್ನು ಬಿತ್ತರಿಸಲಾಯಿತು.
ವಿಶ್ವ ಪರಿಸರ ದಿನದ ಉದ್ಘಾಟನೆಯನ್ನು ಮಾಡಿದ ಎಸ್ ವೈ ಎಸ್ ಪುತ್ತೂರು ಸೆಂಟರ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಖಾಸಿಮಿಯವರು ಪರಿಸರವನ್ನು ಪ್ರೀತಿಸುವುದರ ಮೂಲಕ ಮನುಷ್ಯರು ಪ್ರಬುದ್ಧತೆಯನ್ನು ಮೆರೆಯಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ಜಿಲ್ಲಾ ಇಸಾಬ ಕನ್ವೀನರ್ ಇಕ್ಬಾಲ್ ಬಪ್ಪಳಿಗೆ, ಸೆಂಟರ್ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ, ಎಸ್ಸೆಸ್ಸಫ್ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಅಬ್ದುಲ್ ರಝಾಕ್ ಸ ಅದಿ,ಎಸ್ಸೆಸ್ಸಫ್ ಪುತ್ತೂರು ಡಿವಿಶನ್ ಅಧ್ಯಕ್ಷ ಝುಬೈರ್ ಸಖಾಫಿ ಗಟ್ಟಮನೆ,ಉಪಾಧ್ಯಕ್ಷ ಹಮೀದ್ ಸಖಾಫಿ ಪಾಣಾಜೆ, ಎಸ್ ವೈ ಎಸ್ ಪುತ್ತೂರು ಸೆಂಟರ್ ಟೀಂ ಇಸಾಬ ಅಮೀರ್ ಶಾಹುಲ್ ಹಮೀದ್ ಕಬಕ, ಡಿವಿಶನ್ ಸಮಿತಿ ಸದಸ್ಯ ಅಬೂಬಕ್ಕರ್ ಸ ಅದಿ ಪಮ್ಮಲೆ ಹಾಗೂ ಎಸ್ಸೆಸ್ಸಫ್ ಕ್ಯಾಂಪಸ್ ಕಾರ್ಯಕರ್ತರು ಉಪಸ್ಥಿತಿರಿದ್ದರು.
ಕಾರ್ಯಕ್ರಮವನ್ನು ಎಸ್ಸೆಸ್ಸಫ್ ಪುತ್ತೂರು ಕ್ಯಾಂಪಸ್ ಕಾರ್ಯದರ್ಶಿ ಶಿಹಾಬುರ್ರಹ್ಮಾನ್ ಸ್ವಾಗತಿಸಿ, ಎಸ್ಸೆಸ್ಸಫ್ ಬ್ಲಡ್ ಸೈಬೋ ಉಸ್ತುವಾರಿ ಹಾರಿಸ್ ಅಡ್ಕ ಧನ್ಯವಾದ ಸಲ್ಲಿಸಿದರು.