ಉಳ್ಳಾಲ: SSF ಕರ್ನಾಟಕ ರಾಜ್ಯ ಆದೇಶದಂತೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಇದರ ಸದಸ್ಯರಾದ ಮೌಲಾನ ಶಾಫಿ ಸಅದಿ ಉಸ್ತಾದರ ನಿರ್ದೇಶನದ ಮೇರೆಗೆ ಮಂಜನಾಡಿ ನೆತ್ತಿಲ ಪದವು ನಲ್ಲಿರುವ 115 ಅರ್ಹ ಕುಟುಂಬಗಳಿಗೆ ಜಾತಿ ಮತ ವ್ಯತ್ಯಾಸವಿಲ್ಲದೆ ದ.ಕ ಜಿಲ್ಲಾ ವೆಸ್ಟ್ ಝೋನ್ ವತಿಯಿಂದ ಈದ್ ಕಿಟ್ ವಿತರಣೆಯನ್ನು ಮಾಡಲಾಯಿತು.ಕಿಟ್ ವಿತರಣೆಯ ಮುಂಚಿತವಾಗಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ನಾಯಕರಾದ ಸಯ್ಯಿದ್ ಖುಬೈಬ್ ತಂಙಳ್ ದುಆಗೈದರು. ಎಸ್ಸೆಸ್ಸೆಫ್ ದ.ಕ ಜಿಲ್ಲಾ ವೆಸ್ಟ್ ಝೋನ್ ನಾಯಕರು ಹಾಗೂ ಮುಡಿಪು ಡಿವಿಷನ್ ಅಧ್ಯಕ್ಷ ಇಬ್ರಾಹಿಂ ಅಹ್ಸನಿ ಉಸ್ತಾದರು ಉದ್ಘಾಟಿಸಿದರು. ಜಿಲ್ಲಾ ವೆಸ್ಟ್ ಝೋನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಸ್ತಾದ್ ಉಳ್ಳಾಲ ಸಂದೇಶ ಭಾಷಣ ಮಾಡಿದರು.ಈ ಸಂದರ್ಭದಲ್ಲಿ ದ.ಕ ಜಿಲ್ಲಾ ವೆಸ್ಟ್ ಝೋನ್ ನಾಯಕರಾದ ಹಕೀಂ ಪೂಮನ್ನು, ಉಳ್ಳಾಲ ಡಿವಿಷನ್ ನಾಯಕರು, ಬ್ಲಡ್ ಸೈಬೋ ಉಸ್ತುವಾರಿಗಳಾದ ಅಲ್ತಾಫ್ ಶಾಂತಿಭಾಗ್, ದೇರಳಕಟ್ಟೆ ಸೆಕ್ಟರ್ ನಾಯಕರಾದ ಆಶಿಕ್ ಕಲ್ಪಾದೆ,ರಫೀಕ್ ತಿಬ್ಲಪದವು, ಸಫ್ವಾನ್ ಬದ್ಯಾರ್,ಅನೀಸ್, ಶಿಹಾಬ್ ಉಳ್ಳಾಲ, ನಿಝಾಮ್ ಒಂಬತ್ತು ಕೆರೆ ಮುಂತಾದವರು ಉಪಸ್ಥಿತರಿದ್ದರು.
KCF, INC ಜನರಲ್ ಸೆಕ್ರಟರಿ ಖಮರುದ್ದೀನ್ ಗೂಡಿನ ಬಳಿ, ಆಸಿಫ್ ಹಾಜಿ ಗೂಡಿನ ಬಳಿ, ಸಮೀಉಲ್ಲಾ ಗೂಡಿನ ಬಳಿ ಹಾಗೂ ಇಲ್ಯಾಸ್ ಕೈಕೋ ಕಾರ್ಯಕ್ರಮದ ಯಶಸ್ವಿಗಾಗಿ ವಿಶೇಷವಾದ ಸಹಕಾರ ನೀಡಿದ್ದರು.