janadhvani

Kannada Online News Paper

SSF, SYS ಗಟ್ಟಮನೆ ಯುನಿಟ್ ಅಧೀನದಲ್ಲಿ ತುರ್ತು ಸಹಾಯ

ಗಟ್ಟಮನೆ: ಕೋವಿಡ್-19 ಕಾರಣದಿಂದಾಗಿ ಮಾಡಲಾದ ಲಾಕ್’ಡೈನ್ ನಿಂದ ದೇಶದಾದ್ಯಂತ ಹಲವಾರು ಜನರು ದಿನಬಳಕೆ ಸಾಮಗ್ರಿಗಳಿಲ್ಲದೆ ಕಷ್ಟಪಡುತ್ತಿದ್ದಾರೆ. ಇದನ್ನು ಅರಿತು ಹಲವಾರು ಸಂಘಟನೆಗಳು ಹಾಗೂ ಸಂಘಸಂಸ್ಥೆಗಳು ಅಂತವರ ನೆರವಿಗೆ ಮುಂದೆ ಬಂದಿದ್ದಾರೆ.

ಇದರಂತೆ SSF ಹಾಗೂ SYS ಗಟ್ಟಮನೆ ಯುನಿಟ್ ನಿಂದ ಕಷ್ಟದಲ್ಲಿರುವ ಸುಮಾರು 30 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನೊಳಗೊಂಡ ಕಿಟ್ ವಿತರಿಸಲಾಗಿದೆ.

SSF ಪುತ್ತೂರು ಡಿವಿಷನ್ ಅಧ್ಯಕ್ಷರಾದ ಝುಬೈರ್ ಸಖಾಫಿ ಗಟ್ಟಮನೆ, SSF ಗಟ್ಟಮನೆ ಶಾಖೆ ಅಧ್ಯಕ್ಷರಾದ ಸ್ವಾಲಿಹ್ ಜೌಹರಿ ಗಟ್ಟಮನೆ, ಪ್ರ.ಕಾರ್ಯದರ್ಶಿ ಇರ್ಷಾದ್ ಗಟ್ಟಮನೆ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಬಶೀರ್ ಸಿ.ಎಮ್, ರಿಯಾಝ್ ಗಟ್ಟಮನೆ, ಮುಸ್ತಫ ಗಟ್ಟಮನೆ, ಶಫೀಕ್ ಮುಸ್ಲಿಯಾರ್ ಗಟ್ಟಮನೆ, ಸಿನಾನ್ ಗಟ್ಟಮನೆ, ಶರಫದ್ದೀನ್ ಗಟ್ಟಮನೆ ಹಾಗೂ ಅಲಿ ಗಟ್ಟಮನೆ ಯವರು ಉಪಸ್ಥಿದ್ದರು

error: Content is protected !! Not allowed copy content from janadhvani.com