janadhvani

Kannada Online News Paper

ಬಹ್‌ರೈನ್‌ನಲ್ಲಿ ಈ ವರ್ಷ ಪೂರ್ತಿ ಸಾರ್ವಜನಿಕ ಕ್ಷಮಾಪಣೆ

ಮನಾಮಾ: ಬಹ್‌ರೈನ್‌ನಲ್ಲಿ ಈ ವರ್ಷ ಪೂರ್ತಿ ಸಾರ್ವಜನಿಕ ಕ್ಷಮಾಪಣೆಯನ್ನು ಘೋಷಿಸಲಾಗಿದೆ.

ದೇಶದಲ್ಲಿ ಅಕ್ರಮವಾಗಿ.ಉಳಿದುಕೊಂಡಿರುವವರಿಗೆ ದಂಡ ಅಥವಾ ಶಿಕ್ಷೆಯಿಲ್ಲದೆ ತಮ್ಮ ದೇಶಗಳಿಗೆ ಮರಳಲು ಕ್ಷಮಾಪಣೆ ಅವಧಿಯು ಅವಕಾಶ ನೀಡುತ್ತದೆ.

ಏಪ್ರಿಲ್ 7 ರಿಂದ ಜಾರಿಗೆ ಬಂದಿದ್ದು, ಡಿಸೆಂಬರ್ 31ರ ವರಗೆ ಮುಂದುವರಿಯಲಿದೆ. ವಿಮಾನಗಳ ಪುನರಾರಂಭದೊಂದಿಗೆ, ಅಕ್ರಮ ವಲಸಿಗರಿಗೆ ಮರಳಲು ಅವಕಾಶವಿದೆ.

ದೇಶದಲ್ಲಿ 55,000 ಅಕ್ರಮ ವಲಸಿಗರಿದ್ದಾರೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಇವರಲ್ಲಿ ಹೆಚ್ಚಿನವರು ಭಾರತೀಯರು. ಕುವೈತ್ ಈಗಾಗಲೇ ಏಪ್ರಿಲ್ನಲ್ಲಿ ಕ್ಷಮಾಪಣೆಯನ್ನು ಘೋಷಿಸಿತ್ತು.

error: Content is protected !! Not allowed copy content from janadhvani.com