janadhvani

Kannada Online News Paper

ಸೌದಿ: ಹಣಕಾಸು ಸಂಬಂಧಿತ ಪ್ರಕರಣದಲ್ಲಿ ಜೈಲಲ್ಲಿರುವವರಿಗೆ ಬಿಡುಗಡೆ ಭಾಗ್ಯ

ರಿಯಾದ್: ಸೌದಿ ಅರೇಬಿಯಾದಲ್ಲಿ ಹಣಕಾಸು ಸಂಬಂಧಿತ ಆರೋಪಕ್ಕಾಗಿ ಜೈಲಲ್ಲಿರುವವರನ್ನು ಬಿಡುಗಡೆಗೊಳಿಸುವಂತೆ ರಾಜ ಸಲ್ಮಾನ್ ಆದೇಶ ಹೊರಡಿಸಿದ್ದಾರೆ. ಕೋವಿಡ್ ಹರಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಹಣಕಾಸು ವ್ಯವಹಾರ ಸಂಬಂಧಿತ ಅಪರಾಧಗಳಿಗಾಗಿ ಬಂಧಿಸಲಾದವರನ್ನು ಬಿಡುಗಡೆ ಮಾಡಲು ಆದೇಶಿಸಲಾದೆ. ಪ್ರಕರಣಗಳಲ್ಲಿ ನ್ಯಾಯಾಲಯ ಆದೇಶ ನೀಡಬೇಕಾಗಿಲ್ಲ, ಮತ್ತು ಈಗಿನ ಆವಸ್ಥೆಯನ್ನು ಪರಿಗಣಿಸಿ, ಬಿಡುಗಡೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹಣಕಾಸಿನ ಪ್ರಕರಣಗಳಿಗಾಗಿ ಭಾರತೀಯರು ಸೇರಿದಂತೆ ಅನೇಕರು ಜೈಲಿನಲ್ಲಿದ್ದಾರೆ. ಈ ನಿರ್ಧಾರವು ಜಾಮೀನು ನಿಂತು ಸಿಕ್ಕಿಬಿದ್ದವರು ಸೇರಿದಂತೆ ಎಲ್ಲರಿಗೂ ಸಮಾಧಾನಕರವಾಗಿದೆ.

error: Content is protected !! Not allowed copy content from janadhvani.com