ಉಳ್ಳಾಲ:ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಇದರ ವಾರ್ಷಿಕ ಮಹಾಸಭೆ ದಿನಾಂಕ 06/03/2020 ರಂದು ಅಲ್ ಮದೀನ ಹಾಲ್ ತಿಬ್ಲಪದವಿನಲ್ಲಿ ಡಿವಿಶನ್ ನಾಯಕರಾದ ರಝ್ಝಾಕ್ ಸಅದಿಯವರ ದುಆದ ಮೂಲಕ ಡಿವಿಶನ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯನ್ನು ಎಸ್ಸೆಸ್ಸೆಫ್ ದ ಕ ವೆಸ್ಟ್ ಝೊನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಉದ್ಘಾಟಿಸಿದರು.ಡಿವಿಶನ್ ಮಹಾಸಭೆಯ ವೀಕ್ಷಕರಾಗಿ ವೆಸ್ಟ್ ಝೊನ್ ನಾಯಕರಾದ ನವಾಝ್ ಸಖಾಫಿ, ಮನ್ಸೂರ್ ಬಜಾಲ್ ರವರು ಆಗಮಿಸಿದ್ದರು .
ಎಸ್ಸೆಸ್ಸೆಫ್ ದ ಕ ಜಿಲ್ಲಾ ಕೋಶಾಧಿಕಾರಿ ಮುಹಮ್ಮದ್ ಅಲೀ ತುರ್ಕಳಿಕೆ ಯವರು ಕಾರ್ಯಕರ್ತರಿಗೆ ಸಾಂಘಿಕ ತರಗತಿ ನಡೆಸಿಕೊಟ್ಟರು.
ನೂತನ ಸಮಿತಿಯ ಅಧ್ಯಕ್ಷರಾಗಿ ಇರ್ಫಾನ್ ನೂರಾನಿ, ಉಪಾಧ್ಯಕ್ಷರಾಗಿ ಜುನೈದ್ ಸಖಾಫಿ,ಇಸ್ಮಾಯಿಲ್ ತಲಪಾಡಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜಾಫರ್ ಯು ಎಸ್, ಕಾರ್ಯದರ್ಶಿಯಾಗಿ ಅನ್ವೀಝ್ ತಲಪಾಡಿ, ಸುಹೈಲ್ ದೇರಳಕಟ್ಟೆ, ಕೋಶಾದಧಿಕಾರಿಯಾಗಿ ಸಿರಾಜುದ್ದೀನ್ ತಲಪಾಡಿ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮೊಹಮ್ಮದ್ ಆಶಿಕ್ ಹಾಗೂ 17 ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ಆಯ್ಕೆಮಾಡಲಾಯಿತು.
ಎಸ್ಸೆಸ್ಸೆಫ್ ದ.ಕ ಜಿಲ್ಲಾ ಉಪಾಧ್ಯಕ್ಷರಾದ ತೌಸೀಫ್ ಸಅದಿ, ವೆಸ್ಟ್ ಝೊನ್ ನಾಯಕರಾದ ಇಲ್ಯಾಸ್ ಪೊಟ್ಟೊಲಿಕೆ, ಶರೀಫ್ ಮುಡಿಪು, ಮುಡಿಪು ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ಅಬೂಸ್ವಾಲಿಹ್ ಹರೇಕಳ ಉಪಸ್ಥಿತರಿದ್ದರು.
ಡಿವಿಶನ್ ಕಾರ್ಯದರ್ಶಿ ಹಮೀದ್ ತಲಪಾಡಿ ಯವರು ಸ್ವಾಗತಿಸಿ, ಡಿವಿಶನ್ ನೂತನ ಕಾರ್ಯದರ್ಶಿ ಜಾಫರ್ ಯು ಎಸ್ ರವರು ವಂದಿಸಿದರು.