janadhvani

Kannada Online News Paper

ಎಸ್ಸೆಸ್ಸೆಪ್ ಜಯನಗರ ಡಿವಿಷನ್ ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ನಈಮಿ ಪುನರಾಯ್ಕೆ

ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್‌ ಜಯನಗರ ಡಿವಿಷನ್‌ನ ವಾರ್ಷಿಕ ಮಹಾಸಭೆಯು ಬಿಸ್ಮಿಲ್ಲಾ ನಗರ್ ಮುನವ್ವರ ಮಸ್ಜಿದ್ ನಲ್ಲಿ ಡಿವಿಷನ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ನಈಮಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಯ್ಯದ್ ಸಫ್ವಾನ್ ತಂಗಳ್ ದುವಾದೊಂದಿಗೆ ಸಭೆಗೆ ಚಾಲನೆ ನೀಡಿದರು. ಜಿಲ್ಲಾ ಕಾರ್ಯದರ್ಶಿ ಸಂಶುದ್ದೀನ್ ಅಝ್‌ಹರಿ ಉಸ್ತಾದರು ಪ್ರಸ್ತುತ ಭಾರತದ ಸ್ಥಿತಿ ಗತಿ ಮತ್ತು ಸಂಘಟನಾ ಚಟುವಟಿಕೆಗಳ ಅನಿವಾರ್ಯತೆಯನ್ನು ವಿವರಿಸಿ ಉದ್ಘಾಟನೆಯನ್ನು ಮಾಡಿದರು.

ಪ್ರ.ಕಾರ್ಯದರ್ಶಿ ಶರೀಫ್ ಮಡಿವಾಳ ರವರು ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ನಜೀಬ್ ಕೋರಮಂಗಳರವರು ವಾರ್ಷಿಕ‌ ಆಯವ್ಯಯವನ್ನು ಮಂಡಿಸಿದರು. ಜಿಲ್ಲೆಯಿಂದ ನಿರೀಕ್ಷಕರಾಗಿ ಆಗಮಿಸಿದ್ದ ನುಫೈಲ್ ರವರು ಕೌನ್ಸಿಲ್ ಗೆ ನೇತೃತ್ವ ನೀಡಿ ತರಗತಿ ನಡೆಸಿ ಕೊಟ್ಟರು.ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ನಈಮಿ,ಪ್ರ.ಕಾರ್ಯದರ್ಶಿ ಯಾಗಿ ಶರೀಫ್ ಮಡಿವಾಳ,ಕೋಶಾಧಿಕಾರಿಯಾಗಿ ನಜೀಬ್ ಕೋರಮಂಗಳ,ಕ್ಯಾಂಪಸ್ ಕಾರ್ಯದರ್ಶಿ ಯಾಗಿ ಅಲ್ತಾಫ್ ರವರನ್ನು ಪುನರಾಯ್ಕೆ ಮಾಡಲಾಯಿತು.

ಉಪಾಧ್ಯಕ್ಷ ರಾಗಿ ಜಮಾಲುದ್ದೀನ್ ಸಖಾಫಿ ಮತ್ತು ಸಿದ್ದೀಕ್ ಸಖಾಫಿ,ಕಾರ್ಯದರ್ಶಿಗಳಾಗಿ ಹೈದರ್ ಎಸ್.ಜಿ ಪಾಲ್ಯ ಮತ್ತು ಸಂಶುದ್ದೀನ್ ಜೆ.ಪಿ.ನಗರ ಹಾಗೂ ಹದಿನೆಂಟು ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು.ಇಶಾರ ಚಂದಾ ಅಭಿಯಾನದಲ್ಲಿ ಅತೀ ಹೆಚ್ಚು ಸದಸ್ಯರನ್ನು ಸೇರಿಸಿದ ಜೆ.ಪಿ.ನಗರ ಶಾಖೆಗೆ ಕಾಣಿಕೆ ಯನ್ನು ನೀಡಲಾಯಿತು.

error: Content is protected !! Not allowed copy content from janadhvani.com