janadhvani

Kannada Online News Paper

ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಸಮಿತಿಯ ವಾರ್ಷಿಕ ಮಹಾಸಭೆ

ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಸಮಿತಿಯ ವಾರ್ಷಿಕ ಮಹಾಸಭೆಯು ಬಿ.ಸಿ ರೋಡಿನ ಜಿಲ್ಲಾ ಕಛೇರಿಯಲ್ಲಿ ಡಿವಿಷನ್ ಅಧ್ಯ ಕ್ಷರಾದ ಅಕ್ಬರ್ ಅಲಿ ಮದನಿ ಉಸ್ತಾದರ ಅಧ್ಯಕ್ಷತೆಯಲ್ಲಿ ಜರಗಿತು.

ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಸೆರ್ಕಳ ಇಬ್ರಾಹಿಮ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರ. ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ ವರದಿ ವಾಚಿಸಿ, ಕೋಶಾಧಿಕಾರಿ ಮುಹಮ್ಮದ್ ಅಲಿ ಮದನಿ ಲೆಕ್ಕಪತ್ರ ಮಂಡಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಂತರ ಜಿಲ್ಲಾ ನಾಯಕರಾದ ನವಾಝ್ ಸಖಾಫಿ ತರಗತಿ ಮಂಡಿಸಿದರು.

ವೀಕ್ಷಕರಾಗಿ ದ.ಕ ವೆಸ್ಟ್ ಝೋನ್ ಅಧ್ಯಕ್ಷರಾದ ಮುನೀರ್ ಸಖಾಫಿ ಮಹಾಸಭೆಯ ಪ್ರಕ್ರಿಯೆಗಳನ್ನು ನಡೆಸಿದರು. ಹಳೆಯ ಸಮಿತಿಯನ್ನು ಬರ್ಕಾಸ್ತುಗೊಳಿಸಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.

ಅಧ್ಯಕ್ಷರಾಗಿ ಸಿದ್ದೀಕ್ ಸಅದಿ, ಪ್ರಧಾನ ಕಾರ್ಯದರ್ಶಿಯಾಗಿ ಹಾರಿಸ್ ಪೆರಿಯಪಾದೆ, ಕೋಶಾಧಿಕಾರಿಯಾಗಿ ಅಸ್ಲಂ ಸಂಪಿಲ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಹಾರಿಸ್ ಚಟ್ಟೆಕ್ಕಲ್, ಉಪಾಧ್ಯಕ್ಷರಾಗಿ ಮುಹಮ್ಮದ್ ಅಲಿ ಮದನಿ, ಹಂಝ ಮಂಚಿ, ಕಾರ್ಯದರ್ಶಿಯಾಗಿ ಮೌಸೂಫ್ ಅಬ್ದುಲ್ಲ
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಕ್ಬರ್ ಅಲಿ ಮದನಿ, ಇಬ್ರಾಹಿಮ್ ಕರೀಂ ಕದ್ಕಾರ್, ಇಬ್ರಾಹಿಮ್ ಸುರಿಬೈಲು, ಇಬ್ರಾಹಿಮ್ ಪಿ.ಎಸ್, ನೌಫಲ್, ಝುಬೈರ್ ಸಂಪಿಲ, ಮನ್ಸೂರ್ ವಗ್ಗ, ಹನೀಫ್ ಪಲ್ಲಮಜಲ್, ಸಂಶುದ್ದೀನ್ ಪಾದಿಲ ಹಾಗೂ ಮಜೀದ್ ಕದ್ಕಾರ್ ಇವರನ್ನು ಆಯ್ಕೆ ಮಾಡಲಾಯಿತು.

ಡಿವಿಷನ್ ಉಸ್ತುವಾರಿಯಾದ ಜುನೈದ್ ಸಖಾಫಿ ಬೆಳ್ಮ, ಝೋನ್ ನೇತಾರರಾದ ಆಬಿದ್ ನಈಮಿ, ಮನ್ಸೂರ್ ಬಜಾಲ್ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com