janadhvani

Kannada Online News Paper

ನಿಬ್ರಾಸುಲ್ ಹುದಾ ಅಸೊಶಿಯೇಶನ್: ವತಿಯಿಂದ ಬೃಹತ್ ಪ್ರಾರ್ಥನಾ ಸಂಗಮ ಮತ್ತು ಸನ್ಮಾನ ಕಾರ್ಯಕ್ರಮ

ಶೈಖುನಾ ಅಲ್ ಹಾಜ್ ಪಿ.ಕೆ ಮುಹಮ್ಮದ್ ಮದನಿ ಅಳಕೆ ಉಸ್ತಾದರ ಶಿಷ್ಯ ಸಂಘಟನೆಯಾದ ನಿಬ್ರಾಸುಲ್ ಹುದಾ ಅಸೊಶಿಯೇಶನ್ ವತಿಯಿಂದ ಉಸ್ತಾದರ ಮನೆಯಲ್ಲಿ ಬೃಹತ್ ಪ್ರಾರ್ಥನಾ ಸಂಗಮ ಹಾಗೂ ಜಲಾಲಿಯಾ ರಾತೀಬ್ ಮತ್ತು ಅಜ್ಮೀರ್ ಮೌಲಿದ್, ದ್ಸಿಕ್ರ್ ಮಜ್ಲಿಸ್, ಖತ್ಮುಲ್ ಕುರ್’ಆನ್, ಒಲ್ಡ್ ಸ್ಟೂಡೆಂಟ್ ಮೀಟ್ ಕಾರ್ಯಕ್ರಮವು ಶೈಖುನಾ ಪಿ ಕೆ ಉಸ್ತಾದರ ಅದ್ಯಕ್ಷತೆಯಲ್ಲಿ ನಡೆಯಿತು‌.

ಕಾರ್ಯಕ್ರಮದ ಉದ್ಘಾಟನೆಯಲ್ಲಿ ಕರಾಯ ಕಾಸಿಮ್ ಮದನಿ ಉಸ್ತಾದ್ ನಿರ್ವಹಿಸಿದ್ದರು. ಮುಖ್ಯ ಅಥಿತಿಯಾಗಿ ಆಗಮಿಸಿದ ಅಸಯ್ಯಿದ್ ಹಬೀಬುಲ್ಲಾಹ್ ತಂಙಳ್ ಕುಪ್ಪೆಟ್ಟಿ ಮುಖ್ಯ ಪ್ರಭಾಷಣ ಮಾಡಿ ಆಶಿರ್ವದಿಸಿದರು.

ಜಲಾಲಿಯಾ ದ್ಸಿಕ್ರ್ ಮಜ್ಲಿಸ್ ನ ನೇತೃತ್ವವು ಮಸ್ಹೂದ್ ಸಅದಿ ಪದ್ಮುಂಜೆ ಯವರ ವಹಿಸಿದ್ದರು. ಎಲ್ಲಾ ವಿಧ ಸಂಘ ಸಂಸ್ಥೆಗಳು ಗಳಲ್ಲಿ ಗುರುತಿಸಿಕೊಂಡು ಸಮುದಾಯದ ಉನ್ನತಿಗಾಗಿ ಕಾರ್ಯಚರಿಸುತ್ತಿರುವ ನಿಬ್ರಾಸುಲ್ ಹುದಾ ಅಸೊಶಿಯೇಶನ್ ನ ಸದಸ್ಯರಾದ A.P ಆದಮ್ ಮದನಿ ಅತೂರು, ಅಶ್ರಫ್ ಮುಸ್ಲಿಯಾರ್ ಮೂಳೂರು, ಹಸೈನಾರ್ ಆನೆಮಹಲ್ ಇವರುಗಳಿಗೆ ನೆನಪಿನ ಕಾಣಿಕೆ ಮತ್ತು ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹೈದರ್ ಮದನಿ ಕರಾಯ, ಅಬ್ದುರಹ್ಮಾನ್ ಸಖಾಫಿ ಖತೀಬರು ಅಳಕೆ, ಕೆ.ವಿ ಉಸ್ತಾದ್ ಕುದ್ರಡ್ಕ, ಸಿದ್ದೀಖ್ ಸಅದಿ ಸುನ್ನಿ ಸೆಂಟರ್ ಮೂಳೂರು, ಡಾ. M.S ಇಬ್ರಾಹಿಮ್ ಮುಸ್ಲಿಯಾರ್ ಶಿಕಾರಿಪುರ, ಸಲಾಮ್ ಮದನಿ ಖತೀಬರು ಉಡುಪಿ ದೊಡ್ಡಣ್ಣಗುಡ್ಡೆ, ಹಾಗೂ ನಿಬ್ರಾಸುಲ್ ಹುದಾ ಅಸೊಶಿಯೇಶನ್ ಇದರ ಪದಾಧಿಕಾರಿಗಳು,ಉಸ್ತಾದರ ನೂರಾರು ಶಿಷ್ಯರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ನಿಬ್ರಾಸುಲ್ ಹುದಾ ಅಸೊಶಿಯೇಶನ್ ಅಧ್ಯಕ್ಷರಾದ AP ಆದಮ್ ಮದನಿ ಆತೂರು ಸ್ವಾಗತಿಸಿ, ಕಾರ್ಯದರ್ಶಿ ಅಶ್ರಫ್ ಮುಸ್ಲಿಯಾರ್ ಮುಳೂರು ನಿರೂಪಿಸಿದರು.

ವರದಿ: ಅಬ್ದುಲ್‌ ಅಝೀಝ್ ಝುಹ್ರಿ ಕಿಲ್ಲೂರು

error: Content is protected !! Not allowed copy content from janadhvani.com