ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ ಹಾಗೂ ಸುನ್ನೀ ಯುವಜನ ಸಂಘ ಎಲಿಮಲೆ ಶಾಖೆಯ ವತಿಯಿಂದ ಎಲಿಮಲೆ ಮಸೀದಿಯ ಮುಂಭಾಗದಲ್ಲಿರುವ ರಾಜ್ಯ ಹೆದ್ದಾರಿಯ ಬೀದಿಗಳನ್ನು ಸ್ವಚ್ಛಗೊಳಿಸಿ ಪ್ಲಾಸ್ಟಿಕ್ ಮುಕ್ತಗೊಳಿಸುವ ಅಭಿಯಾನವು ಆದಿತ್ಯವಾರ ಬೆಳಿಗ್ಗೆ ನಡೆಯಿತು.
ಎಸ್.ವೈ.ಎಸ್ ನಾಯಕರಾದ ಅಬ್ದುಲ್ ಖಾದರ್ ಅತ್ತಿಮರಡ್ಕ, ಫಾರೂಖ್ ಟಿ.ವೈ, ಇಕ್ಬಾಲ್ ಟಿ.ವೈ, ಎಸ್.ಎಸ್.ಎಫ್ ನಾಯಕರಾದ ಜುನೈದ್ ಸಖಾಫಿ ಜೀರ್ಮುಕ್ಕಿ, ಝಕರಿಯ್ಯ ಸಅದಿ, ಸಿದ್ದೀಖ್ ಎಲಿಮಲೆ, ನಿಯಾಝ್ ವೈ.ಎಚ್, ನಾಸಿರ್ ವೈ.ಎಚ್, ಶಾಕಿರ್ ಪಾಣಾಜೆ, ಮುನ್ಝಿರ್ ಚೆನ್ನಾರ್ ಮುಂತಾದವರು ಅಭಿಯಾನದಲ್ಲಿ ಪಾಲ್ಗೊಂಡರು.