janadhvani

Kannada Online News Paper

ಕಟ್ಟದಪಡ್ಪು ವಿನಲ್ಲಿ ಪೆಬ್ರವರಿ 29 ರಂದು ಬೃಹತ್ ಜಲಾಲಿಯ್ಯಾ ರಾತೀಬ್

ಅಲ್ ಮದದ್ ಸುನ್ನಿ ಝುಮಲಾ ಗ್ರೂಪ್ ವತಿಯಿಂದ ಬೃಹತ್ ಜಲಾಲಿಯ್ಯ ರಾತೀಬ್ ಪೆಬ್ರವರಿ 29 ರಂದು ಮಗ್ರಿಬ್ ನಮಾಝಿನ ಬಳಿಕ ಕಟ್ಟದಪಡ್ಪು ಮರ್ಹೂಂ ಜಿ.ಎಂ ಇಸ್ಮಾಯಿಲ್ ವೇದಿಕೆ ಯಲ್ಲಿ ನಡೆಯಲಿದೆ.

ಅಲ್ ಮದದ್ ಸುನ್ನಿ ಗ್ರೂಪ್ ನ ಅಧ್ಯಕ್ಷ ಜಿ.ಎಂ ಹಬೀಬುರ್ರಹ್ಮಾನ್ ಅಹ್ಸನಿ ಕಟ್ಟದಪಡ್ಪು ರವರ ಘನ ಅಧ್ಯಕ್ಷತೆಯಲ್ಲಿ ಪ್ರಸ್ತುತ ಕಾರ್ಯಕ್ರಮ ವನ್ನು ಕೊಕ್ಕಡ ಹಸನಿಯ್ಯಾ ಚಾರಿಟೇಬಲ್ ಟ್ರಸ್ಟ್ ನ ಚೆಯರ್ಮಾನ್ ಶಾಫಿ ಸಖಾಫಿ ಪಟ್ಟೂರ್ ಉದ್ಘಾಟಿಸಲಿದ್ದಾರೆ, ಬಹು/ ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೊಸಿ ತಂಙಳ್ ಮಹತ್ವವಾದ ಜಲಾಲಿಯ್ಯಾ ರಾತೀಬ್ ಮಜ್ಲಿಸ್ ಗೆ ನೇತೃತ್ವ ನೀಡಲಿದ್ದಾರೆ.

ಪ್ರಸ್ತುತ ಕಾರ್ಯಕ್ರಮ ದಲ್ಲಿ ಮುಖ್ಯ ಅಥಿತಿ ಗಳಾಗಿ, ಸ್ಥಳೀಯ ಖತೀಬ್ ಖಲಂದರ್ ಶಾಫಿ ಅಲ್ ಅಝ್ಹರಿ, ಕಕ್ಯಪದವು ಜಮಾಹತ್ ಖತೀಬ್ ಅಬೂಬಕ್ಕರ್ ಸ ಅದಿ, ಮಾವಿನಕಟ್ಟೆ ಖತೀಬ್ ಜಬ್ಬಾರ್ ಸ ಅದಿ, ಕುಲಾಲ್ ಖತೀಬ್ ಸಿದ್ದೀಖ್ ಮದನಿ ಹಾಗೂ ಹಲವಾರು ಉಲಮಾ ನೇತಾರರು, ಉಮಾರಾ ನಾಯಕರುಗಳು, ಸಮಾಜಿಕ ನಾಯಕರುಗಳು ಭಾಗವಹಿಸಲಿದ್ದಾರೆ.

ಸ್ತ್ರೀಯರಿಗೆ ಪ್ರತ್ಯೇಕವಾದ ಸ್ಥಳವಾಕಾಶ ಮೀಸಲಿಡಲಾಗಿದೆ.

ವರದಿ: ಅಶ್ರಫ್ ಕಟ್ಟದಪಡ್ಪು

error: Content is protected !! Not allowed copy content from janadhvani.com