ಅಲ್ ಮದದ್ ಸುನ್ನಿ ಝುಮಲಾ ಗ್ರೂಪ್ ವತಿಯಿಂದ ಬೃಹತ್ ಜಲಾಲಿಯ್ಯ ರಾತೀಬ್ ಪೆಬ್ರವರಿ 29 ರಂದು ಮಗ್ರಿಬ್ ನಮಾಝಿನ ಬಳಿಕ ಕಟ್ಟದಪಡ್ಪು ಮರ್ಹೂಂ ಜಿ.ಎಂ ಇಸ್ಮಾಯಿಲ್ ವೇದಿಕೆ ಯಲ್ಲಿ ನಡೆಯಲಿದೆ.
ಅಲ್ ಮದದ್ ಸುನ್ನಿ ಗ್ರೂಪ್ ನ ಅಧ್ಯಕ್ಷ ಜಿ.ಎಂ ಹಬೀಬುರ್ರಹ್ಮಾನ್ ಅಹ್ಸನಿ ಕಟ್ಟದಪಡ್ಪು ರವರ ಘನ ಅಧ್ಯಕ್ಷತೆಯಲ್ಲಿ ಪ್ರಸ್ತುತ ಕಾರ್ಯಕ್ರಮ ವನ್ನು ಕೊಕ್ಕಡ ಹಸನಿಯ್ಯಾ ಚಾರಿಟೇಬಲ್ ಟ್ರಸ್ಟ್ ನ ಚೆಯರ್ಮಾನ್ ಶಾಫಿ ಸಖಾಫಿ ಪಟ್ಟೂರ್ ಉದ್ಘಾಟಿಸಲಿದ್ದಾರೆ, ಬಹು/ ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೊಸಿ ತಂಙಳ್ ಮಹತ್ವವಾದ ಜಲಾಲಿಯ್ಯಾ ರಾತೀಬ್ ಮಜ್ಲಿಸ್ ಗೆ ನೇತೃತ್ವ ನೀಡಲಿದ್ದಾರೆ.
ಪ್ರಸ್ತುತ ಕಾರ್ಯಕ್ರಮ ದಲ್ಲಿ ಮುಖ್ಯ ಅಥಿತಿ ಗಳಾಗಿ, ಸ್ಥಳೀಯ ಖತೀಬ್ ಖಲಂದರ್ ಶಾಫಿ ಅಲ್ ಅಝ್ಹರಿ, ಕಕ್ಯಪದವು ಜಮಾಹತ್ ಖತೀಬ್ ಅಬೂಬಕ್ಕರ್ ಸ ಅದಿ, ಮಾವಿನಕಟ್ಟೆ ಖತೀಬ್ ಜಬ್ಬಾರ್ ಸ ಅದಿ, ಕುಲಾಲ್ ಖತೀಬ್ ಸಿದ್ದೀಖ್ ಮದನಿ ಹಾಗೂ ಹಲವಾರು ಉಲಮಾ ನೇತಾರರು, ಉಮಾರಾ ನಾಯಕರುಗಳು, ಸಮಾಜಿಕ ನಾಯಕರುಗಳು ಭಾಗವಹಿಸಲಿದ್ದಾರೆ.
ಸ್ತ್ರೀಯರಿಗೆ ಪ್ರತ್ಯೇಕವಾದ ಸ್ಥಳವಾಕಾಶ ಮೀಸಲಿಡಲಾಗಿದೆ.
ವರದಿ: ಅಶ್ರಫ್ ಕಟ್ಟದಪಡ್ಪು