janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾಅತ್ ‘ಪ್ರಜಾ ಭಾರತ’ ತುಮಕೂರಿನಲ್ಲಿ ಯಶಸ್ವಿ ಸಮಾಪ್ತಿ

ತುಮಕೂರು : ಕರ್ನಾಟಕ ಮುಸ್ಲಿಂ ಜಮಾಅತ್ ದ್ವೇಷ ಬಿಟ್ಟು ದೇಶ ಕಟ್ಟು ಎಂಬ ಘೋಷಣೆಯೊಂದಿಗೆ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ನಡೆಸುತ್ತಿರುವ ಪ್ರಜಾ ಭಾರತ ಕಾರ್ಯಕ್ರಮ ತುಮಕೂರು ಈದ್ಗಾ ಮೈದಾನದಲ್ಲಿ ಯಶಸ್ವಿಯಾಗಿ ನಡೆಯಿತು.

ಎಸ್ಸೆಸ್ಸೆಫ್ ಹಾಗೂ ಸ್ಥಳೀಯ ಸಂಘಟನೆಯವರ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಆರೀಫ್ ರಝಾ ತುಮಕೂರು ಅಧ್ಯಕ್ಷತೆ ವಹಿಸಿದರು.ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಹಾಗೂ ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ ಮುಖ್ಯ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ನವಾಝ್ ಭಟ್ಕಳ, ಎಸ್ಸೆಸ್ಸೆಫ್ ತುಮಕೂರು ಜಿಲ್ಲಾಧ್ಯಕ್ಷ ಸುಹೈಲ್,Dr.ಹುಸೈನ್ ಶರೀಫ್ ಇನ್ನಿತರ ಉಲಮಾ ಉಮರಾ ಗಣ್ಯರು ಭಾಗವಹಿಸಿದ್ದರು. ಶಮೀರ್ ಹಿಮಮಿ ಸ್ವಾಗತಿಸಿ ಹಾಫಿಲ್ ಶಹ್ ಬಾಝ್ ಅಶ್ರಫಿ ವಂದಿಸಿದರು.

error: Content is protected !! Not allowed copy content from janadhvani.com