janadhvani

Kannada Online News Paper

ಮಧುಗಿರಿ ಮೋದಿ ವಿರುದ್ಧ ಮುಸ್ಲಿಮ್ ಒಕ್ಕೂಟದಿಂದ ಕೇಸು ದಾಖಲು

ಮಂಗಳೂರು: ಮಧುಗಿರಿ ಮೋದಿ ಅಲಿಯಾಸ್ ಅತುಲ್ ಕುಮಾರ್ ವಿರುದ್ಧ ಮಂಗಳೂರು ಉತ್ತರ ಪೊಲೀಸು ಸ್ಟೇಶನ್ ನಲ್ಲಿ ಮುಸ್ಲಿಮ್ ಒಕ್ಕೂಟ ನಿಯೋಗದಿಂದ ಫಿರ್ಯಾದಿ ಸಲ್ಲಿಕೆ.

ಇತ್ತೀಚೆಗೆ ಮಧುಗಿರಿ ಮೋದಿ ಯಾನೆ ಅತುಲ್ ಕುಮಾರ್, ಪ್ರವಾದಿ ಮುಹಮ್ಮದ್ (ಸ. ಅ ) ರವರ ವಿರುದ್ಧ ಸಾಮಾಜಿಕ ಜಾಲ ತಾಣ ಮಾಧ್ಯಮಗಳಲ್ಲಿ ನಿಂದನಾತ್ಮಕ ಮತ್ತು ಅವಹೇಳನಕಾರಿ ಹೇಳಿಕೆ ನೀಡಿ ವಿವಿಧ ಜಾತಿ ಮತ್ತು ಮತ್ತು ಧರ್ಮದವರ ಮಧ್ಯೆ ಮತೀಯ ದ್ವೇಷ ಹಚ್ಚಿ ಕೋಮು ಗಲಭೆಗೆ ಕುಮ್ಮಕ್ಕು ನೀಡಲಾಗತ್ತು.

ಈ ಅಪರಾಧ ಕೃತ್ಯದ ವಿರುದ್ಧ ಇಂದು ಮುಸ್ಲಿಮ್ ಒಕ್ಕೂಟದ ಅಬ್ದುಲ್ ಜಲೀಲ್ ಅದ್ದಾಕ ರವರು ಮಂಗಳೂರು ಉತ್ತರ ಪೊಲೀಸು ಸ್ಟೇಶನ್ ನಲ್ಲಿ ಫಿರ್ಯಾದಿ ಸಲ್ಲಿಸಿ ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ.

ನಿಯೋಗದಲ್ಲಿ ಸದಸ್ಯರಾದ ಕೆ.ಅಶ್ರಫ್, ಸಿ.ಎಮ್.ಮುಸ್ತಫಾ,ಮೊಹಮ್ಮದ್ ಹನೀಫ್ ಯು,ಬಷೀರ್ ಹೋಕ್ಕಾಡಿ,ಸಮೀರ್ ಆರ್.ಕೆ
ಮತ್ತು ನೌಶಾದ್ ಬಂದರ್ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com