janadhvani

Kannada Online News Paper

ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಗೆ ನೂತನ ನಾಯಕತ್ವ

ಮೊಂಟೆಪದವು: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಸಮಿತಿಯ ವಾರ್ಷಿಕ ಕೌನ್ಸಿಲ್ ಫೆಬ್ರವರಿ 16 ರಂದು ಎಸ್ಸೆಸ್ಸೆಫ್ ಮರಿಕ್ಕಳ ಶಾಖಾ ಕಛೇರಿನಲ್ಲಿ ಜರಗಿತು.

ಸೆಕ್ಟರ್ ಅಧ್ಯಕ್ಷ ಇರ್ಶಾದ್ ಮದನಿ ಅಧ್ಯಕ್ಷತೆ ವಹಿಸಿದ್ದರು, ಎಸ್ಸೆಸ್ಸೆಫ್ ಮರಿಕ್ಕಳ ಶಾಖಾ ಉಪಾಧ್ಯಕ್ಷರಾದ ಇಬ್ರಾಹಿಂ ಮದನಿ ಉದ್ಘಾಟಿಸಿದರು. ಪ್ರ.ಕಾರ್ಯದರ್ಶಿ ಮನ್ಸೂರ್ ಹಿಮಾಮಿ ಸ್ವಾಗತಿಸಿದರು. ಚುನಾವಣಾ ವೀಕ್ಷಕರಾಗಿ ಮುಡಿಪು ಡಿವಿಷನ್ ಕೋಶಾದಿಕಾರಿ ಶರೀಫ್ ಮುಡಿಪುರವರು ಸಭೆಯನ್ನು ನಡೆಸಿಕೊಟ್ಟರು. ಡಿವಿಷನ್ ಪ್ರಧಾನ ಕಾರ್ಯದರ್ಶಿ ನೌಫಲ್ ಫರಿದ ನಗರ ಹಾಗೂ ಕ್ಯಾಂಪಸ್ ಅಬೂಸ್ವಾಲಿ ಹರೆಕಳ ಮುಖ್ಯ ಅತಿಥಿಗಳಾಗಿದ್ದರು.

ಸಾಂಘಿಕ ಅವಧಿಯ ಒಂದು ವರುಷದ ಕಾರ್ಯಸಾಧನೆಗಳ ವಿವರ ಮತ್ತು ಲೆಕ್ಕ ಪತ್ರವನ್ನು ಮಂಡಿಸಲಾಯಿತು.
ನೂತನ ಆಡಳಿತ ಮಂಡಳಿಯನ್ನು‌ ಆಯ್ಕೆ ಮಾಡಲಾಯಿತು, ಅಧ್ಯಕ್ಷರುರಾಗಿ ಮನ್ಸೂರ್ ಹಿಮಾಮಿ ಮರಿಕ್ಕಳ, ಉಪಾಧ್ಯಕ್ಷರುಗಳಾಗಿ ನಾಸೀರ್ ಮೋಂಟುಗೋಳಿ, ಶರೀಫ್ ವಿದ್ಯಾನಗರ, ಮಜೀದ್ ಮರಿಕ್ಕಲ, ಪ್ರಧಾನ ಕಾರ್ಯದರ್ಶಿಯಾಗಿ ನಿಝಾಜ್ ಪಡಿಕ್ಕಲ್, ಜೊತೆ ಕಾರ್ಯದರ್ಶಿ ಗಳಾಗಿ ಸಿನಾನ್ ಸುಟ್ಟ ಡಿಜಿ ಕಟ್ಟೆ, ನಿಝಾಮ್ ಮೊಂಟೆಪದವು, ಯಾಝೀದ್ ಮರಿಕ್ಕಲ, ಕೋಶಾದಿಕಾರಿ ಯಾಗಿ ಇರ್ಶಾದ್ ಮುದಸ್ವೀರ್ ಮೊಂಟೆಪದವು, ಕ್ಯಾಂಪಸ್ ಕಾರ್ಯದರ್ಶಿ ಯಾಗಿ ಸಮದ್ ಮೊಂಟೆಪದವು. ಹಾಗೂ ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

error: Content is protected !! Not allowed copy content from janadhvani.com