janadhvani

Kannada Online News Paper

ಕುವೈಟ್‌ನಲ್ಲಿ ವಿತರಣಾ ವಾಹನಗಳಿಗೆ ನಿಯಂತ್ರಣ-ಪರವಾನಗಿ ಸ್ಥಗಿತ

ಕುವೈತ್ ಸಿಟಿ: ಕುವೈಟ್‌ನಲ್ಲಿ ವಿತರಣಾ(ಡೆಲಿವರಿ) ವಾಹನಗಳಿಗೆ ನಿಯಂತ್ರಣ ಏರ್ಪಡಿಸಲಾಗಿದೆ. ಆಹಾರ ಮಾರಾಟ ವಾಹನಗಳಿಗೆ ನೀಡಲಾಗುವ ಪರವಾನಗಿಯನ್ನು ಸ್ಥಗಿತಗೊಳಿಸುವಂತೆ ಗೃಹ ಸಚಿವರು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯಕ್ಕೆ ಸೂಚನೆ ನೀಡಿದ್ದಾರೆ.

ಬೈಕು ಅಪಘಾತಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಂಸದ ಮುಹಮ್ಮದ್ ಅಲ್-ದಲಾಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಸ್ವತಃ ಈ ವಿಷಯ ತಿಳಿಸಿದ್ದಾರೆ. ಅಂತಹ ವಾಹನಗಳಿಗೆ ಸಂಬಂಧಿಸಿದ ಸಾರಿಗೆ ಇಲಾಖೆಯ ನಿಯಮಗಳು ಮತ್ತು ಷರತ್ತುಗಳನ್ನು ಇತ್ಯರ್ಥಪಡಿಸುವವರೆಗೆ ವಿತರಣಾ ಪರವಾನಗಿ ನೀಡಬಾರದು ಎಂದು ಸಚಿವರು ವಿನಂತಿಸಿದರು.

ಆಹಾರ ಮತ್ತು ಇತರ ಉಪಯುಕ್ತ ವಾಹನಗಳ ವಿತರಣೆಗೆ ಪೂರೈಸಬೇಕಾದ ಆರೋಗ್ಯ ಮಾನದಂಡಗಳ ಕುರಿತು ಗೃಹ ಸಚಿವಾಲಯವು ಆಹಾರ ಮತ್ತು ಪೋಷಣೆಗಾಗಿ ಸಾರ್ವಜನಿಕ ಪ್ರಾಧಿಕಾರದೊಂದಿಗೆ ಸಮನ್ವಯ ಸಾಧಿಸುತ್ತಿದೆ. ದ್ವಿಚಕ್ರ ವಾಹನ ಸಂಚಾರವನ್ನೂ ನಿಯಂತ್ರಿಸಲು ಯೋಜನೆಗಳು ನಡೆಯುತ್ತಿವೆ. ಈ ವಿಷಯವನ್ನು ಲೋಕೋಪಯೋಗಿ ಸಚಿವಾಲಯ ಮತ್ತು ರಸ್ತೆ ಮತ್ತು ಸಾರಿಗೆಗಾಗಿ ಸಾರ್ವಜನಿಕ ಪ್ರಾಧಿಕಾರದೊಂದಿಗೆ ಚರ್ಚಿಸಲಾಗುತ್ತಿದೆ.

ವಾಹನ ಸವಾರರು ಸಂಚಾರ ಕಾನೂನುಗಳನ್ನು ಪಾಲಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಸಂಚಾರ ಇಲಾಖೆ ಅಭಿಯಾನವನ್ನು ನಡೆಸುತ್ತಿದೆ ಮತ್ತು ಸಾರ್ವಜನಿಕ ರಸ್ತೆಗಳಲ್ಲಿ ಸೈಕಲ್ ಯಾತ್ರಿಕರಿಗಾಗಿ ವಿಶೇಷ ಟ್ರ್ಯಾಕ್ ನಿರ್ಮಿಸಲು ವಸತಿ ಮತ್ತು ಕಲ್ಯಾಣ ಪ್ರಾಧಿಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.

error: Content is protected !! Not allowed copy content from janadhvani.com