ರಿಯಾದ್: ದಾರುಸ್ಸಲಾಮ್ ಹೆಲ್ಪ್ ಲೈನ್ ರಿಯಾದ್ ಕೇಂದ್ರ ಸಮಿತಿ ಇದರ ವಾರ್ಷಿಕ ಮಹಾ ಸಭೆಯು ದಿನಾಂಕ 7-2-2020 ಶುಕ್ರವಾರ ದಂದು ರಿಯಾದಿನ ಬದಿಯದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಮುಲ್ಕಿ ಅಬ್ದುಲ್ ಹಮೀದ್ ಇವರು ವಹಿಸಿದ್ದರು. ತೌಫೀಕ್ ಮುಲ್ಕಿ ಖಿರಾಅತ್ ಪಠಿಸಿದರು.
ಸಾಮಾಜಿಕವಾಗಿ ಕಾರ್ಯಾಚರಿಸಲು ಸುರತ್ಕಲ್, ಪಡುಬಿದ್ರಿ, ಮುಲ್ಕಿ ಪರಿಸರದ ಗಲ್ಫ್ ಪ್ರವಾಸಿಗರು ಕಳೆದ ಒಂದು ವರ್ಷದ ಹಿಂದೆ ಹೊಸ ಸಮಿತಿಯನ್ನು ಕಾರ್ಯರೂಪಕ್ಕೆ ತಂದಿದ್ದರು. ಈ ಭಾರಿ ಬಡ ನಿರ್ಗತಿಕ ಮಕ್ಕಳ ಉಚಿತ ಮುಂಜಿ ಕಾರ್ಯಕ್ರಮ ನಡೆಸುವುದು, ರಂಝಾನ್ ನಲ್ಲಿ ಕಿಟ್ ವಿತರಿಸುವುದು ಮುಂತಾದ ಹಲವಾರು ಕಾರ್ಯಚಟುವಟಿಕೆ ಗಳಿಗೆ ಈ ಸಭೆಯಲ್ಲಿ ತೀರ್ಮಾನಿಸಲಾಯಿತು.
2020/21 ನೇ ಸಾಲಿನ ನೂತನ ಸಾಲಿನ ಸದಸ್ಯರ ವಿವರ ಈ ಕೆಳಗಿನಂತಿವೆ. ಗೌರವಾಧ್ಯಕ್ಷರು ಅಬ್ದುಲ್ ಹಮೀದ್ ಮುಲ್ಕಿ, ಅಧ್ಯಕ್ಷರು ಕಬೀರ್ ಕೃಷ್ಣಾಪುರ, ಉಪಾಧ್ಯಕ್ಷರು ಮೈೂದಿನ್ ಕೃಷ್ಣಾಪುರ, ಕಾರ್ಯದರ್ಶಿ ಎಂ.ಹುಸೇನ್ ಮುಲ್ಕಿ, ಜತೆ ಕಾರ್ಯದರ್ಶಿ ತೌಫಿಕ್ ಕೊಲ್ನಾಡ್, ಕೋಶಾಧಿಕಾರಿ ಹಮೀದ್ ಕೊಲ್ನಾಡ್, ಹಾಗೂ ಸಲಹೆಗಾರರಾಗಿ ಉಸ್ಮಾನ್ ಮುಕ್ಕ ಜತೆ ಸಲಹೆಗಾರರಾಗಿ ಮನ್ಸೂರ್ ಜೋಕಟ್ಟೆ, ಲೆಕ್ಕ ಪರಿಶೋಧಕ ಶಂಶೀರ್ ಮುಲ್ಕಿ ಸೇರಿದಂತೆ ನಾಲ್ಕು ಮಂದಿ ಎಕ್ಸಿಕ್ಯೂಟಿವ್ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಹುಸೇನ್ ಮುಲ್ಕಿ ಸ್ವಾಗತಿಸಿ, ಧನ್ಯವಾದಗೈದರು.
ವರದಿ: ರಿಯಾ ನೆಲ್ಯಾಡಿ
Masha allah