ಉಳ್ಳಾಲ: ಅಲ್ ಮಸ್ಜಿದುಲ್ ಜಾಮಿಉಲ್ ಅಮೀನ್ ಅಳೇಕಲ ಉಳ್ಳಾಲ ಇದರ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಮುಹಿಯ್ಯಿದ್ದೀನ್ ರಾತೀಬ್ ಮತ್ತು ದ್ಸಿಕ್ರ್ ಹಲ್ಖಾ ಕಾರ್ಯಕ್ರಮವು ಫೆ.12ರಿಂದ 16 ರ ತನಕ ನಡೆಯಲಿದೆ.
ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಉಳ್ಳಾಲ ರವರ ದುಆ ಆಶೀರ್ವಾದದೊಂದಿಗೆ ಮ,ಎಸ್ ಎಮ್ ತಂಙಳ್ ವೇದಿಕೆಯಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಜರುಗಲಿದೆ.
ಪೆಬ್ರವರಿ 12 ಅಸರ್ ನಮಾಝ್ ಬಳಿಕ ದ್ವಜಾರೋಹಣ: ನೇತ್ರತ್ವ ಜಲಾಲ್ ತಂಙಳ್, ಪಟ್ಟಾಂಬಿ ಉಸ್ತಾದ್ ,ಪ್ರಭಾಷಣ :- ಅಸ್ಸಯ್ಯದ್ ಯಾಸೀನ್ ತಂಙಳ್ ಕೆದುಂಬಾಡಿ.
ಪೆಬ್ರವರಿ 13: ದ್ಸಿಕ್ರ್ ಹಲ್ಖಾ ಕಾರ್ಯಕ್ರಮ
ನೇತ್ರತ್ವ ಸಯ್ಯಿದ್ ಶರಫುದ್ದೀನ್ ಅಲ್ ಹೈದ್ರೋಸಿ ತಂಙಳ್ ಫರೀದ್ ನಗರ,ಭಾಷಣ ರಾಫಿ ಅಹ್ಸನಿ ಕಾಂತಪುರಮ್.
ಪೆಬ್ರವರಿ 14:ಭಾಷಣ ಹಂಝ ಮಿಸ್ಬಾಹಿ ಓಟ್ಟಪ್ಪಡವು.
ಪೆಬ್ರವರಿ 15:ಭಾಷಣ ಬಶೀರ್ ಅಮಾನಿ ಕೂತ್ತುಪರಂಬ್.
ಪೆಬ್ರವರಿ 16 ಮಗ್ರಿಬ್ ನಮಜ್ ಬಳಿಕ ಲದಲ್ ಹಬೀಬ್ ತಂಡದಿಂದ ಮುಹಿಯ್ಯಿದ್ದೀನ್ ಮಾಲೆ ಆಲಾಪಣೆ.
ಇಶಾ ನಮಾಝ್ ಬಳಿಕ ಸಮಾರೋಪ ಸಮಾರಂಭ
ಉದ್ಭೋದನೆ:ಎಮ್.ಸಿ ಮುಹಮ್ಮದ್ ಫೈಝಿ ಪಟ್ಲ.
ರಾತೀಬ್ ಕಾರ್ಯಕ್ರಮ ನೇತ್ರತ್ವ: ಅಸ್ಸಯ್ಯದ್ ಶಿಹಾಬುದ್ದೀನ್ ಅಲ್ ಮಶ್ಹೂರ್ ತಂಙಳ್ ತಲಕ್ಕಿ.
ಹಾಗೂ ಇನ್ನಿತರ ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪ್ರ ಕಾರ್ಯದರ್ಶಿ ಫಾರೂಕ್ ಹಾಜಿ ಪ್ರಕಟನೆಯಲ್ಲಿ ತಿಲಿಸಿದ್ದಾರೆ.
ಅಲ್ಲಾಹನ ತೃಪ್ತಿಯ ಮೂಲಕ ಸರ್ವ ದೀನಿ ಕಾರ್ಯಕ್ರಮಗಳನ್ನು ಅಲ್ಲಾಹು ವಿಜಯಗೊಳಿಸಲಿ. ಶೈಖುನಾ ಪಟ್ಟಾಂಬಿ ಉಸ್ತಾದರ ನೇತೃತ್ವದಲ್ಲಿ ಇನ್ನಷ್ಟು ಕಾಲ ನಮ್ಮೂರಿಗೆ ದೀನಿ ವಿಜ್ಞಾನದ ಬೆಳಕು ಹರಡಲಿ. ಊರಿನ ಹಿರಿಯ ಧಾರ್ಮಿಕ ಉಮರಾ ಮುಖಂಡರಾದ ಜನಾಬ್ ಯು.ಎಸ್.ಹಂಝ ಹಾಜಿಯವರಿಗೆ ಇನ್ನು ಹಲವು ವರುಷಗಳು ದೀನಿ ಸೇವೆ ನಡೆಸಲು ಅಲ್ಲಾಹು ತೌಫೀಕ್ ಕರುಣಿಸಲಿ…ಅಮೀನ್ ಯಾ ರಬ್ಬಲ್ ಆಲಮೀನ್.