ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (SSF) ನೆಕ್ಕಿಲು ಶಾಖೆ ಇದರ ವಾರ್ಷಿಕ ಕೌನ್ಸಿಲ್ ದಿನಾಂಕ 02-02-2020 ಭಾನುವಾರ ಇಶಾ ನಮಾಝ್ ಬಳಿಕ ಶಾಖಾ ಅಧ್ಯಕ್ಷರಾದ ಬಹು! ಅಶ್ರಫ್ ಮದನಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ವೀಕ್ಷಕರಾಗಿ ಬಂದ ಕುಪ್ಪೆಟ್ಟಿ ಸೆಕ್ಟರ್ ಅಧ್ಯಕ್ಷರಾದ ಬಹು! ಮುಸ್ತಫಾ ಮದನಿ,ಯೂಸುಫ್ ಬೋವು, ಸ್ಥಳೀಯ ಜಮಾಅತ್ ಅಧ್ಯಕ್ಷರಾದ ಬಹು! ರಫೀಕ್ ಸಅದಿ,SYS ನೆಕ್ಕಿಲು ಬ್ರಾಂಚ್ ಅಧ್ಯಕ್ಷರಾದ ಜನಾಬ್! ಆದಂ ಮಾವಿನಗುಳಿ,ಮಲ್ಜಅ್ ಸಮಿತಿ ನೆಕ್ಕಿಲು ಇದರ ಅಧ್ಯಕ್ಷರಾದ ಬಹು! N.M ಶರೀಫ್ ಸಖಾಫಿ ಇವರ ನೇತೃತ್ವದಲ್ಲಿ ಈ ಕೆಳಗಂಡ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ಮಜೀದ್,ಉಪಾಧ್ಯಕ್ಷರಾಗಿ ಶರೀಫ್ ಜಾರಿಗೆದಡಿ ಹಾಗೂ ನೌಶಾದ್ ನೆಕ್ಕಿಲು, ಪ್ರ.ಕಾರ್ಯದರ್ಶಿಯಾಗಿ ಬದ್ರು ಮುನೀರ್,ಜೊತೆ ಕಾರ್ಯದರ್ಶಿಯಾಗಿ ಇರ್ಫಾನ್ ಹಾಗೂ ಶಿಹಾಬ್ ಲಿಂಗೊಟ್ಟು,ಕೋಶಾಧಿಕಾರಿಯಾಗಿ ಅಶ್ರಫ್ ಅಂಡೆಕೇರಿ ಹಾಗೂ 10 ಮಂದಿಯನ್ನು ಕಾರ್ಯಕಾರಣಿ ಸಮಿತಿಯ ಸದಸ್ಯರನ್ನಾಗಿ ಆರಿಸಲಾಯಿತು
ವರದಿ; ಅಶ್ರಫ್ ಮದನಿ ನೆಕ್ಕಿಲು