janadhvani

Kannada Online News Paper

ಎಸ್ಸೆಸ್ಸೆಫ್ ಮಿತ್ತರಾಜೆ ಶಾಖೆ: ನೂತನ ಪದಾಧಿಕಾರಿಗಳ ಆಯ್ಕೆ

ಸಾಲೆತ್ತೂರ್: ಎಸ್ಸೆಸ್ಸೆಫ್ ಮಿತ್ತರಾಜೆ ಶಾಖೆ ಇದರ ವಾರ್ಷಿಕ ಕೌನ್ಸಿಲ್ ದಿನಾಂಕ 26-01-2020 ಆದಿತ್ಯವಾರ ರಾತ್ರಿ ಪಂಜರಕೋಡಿ ನೂರುಲ್ ಉಲೂಂ ಮದ್ರಸದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಯುನಿಟ್ ಅಧ್ಯಕ್ಷರಾದ ದಾವೂದ್’ರವರು ವಹಿಸಿದ್ದರು, ಪಂಜರಕೋಡಿ ಖತೀಬ್ ಅಬೂಬಕ್ಕರ್ ಮದನಿ ಉಸ್ತಾದ್ ಪ್ರಾರ್ಥನೆಗೆ ನೇತೃತ್ವ ನೀಡಿದರು, ಮಸೂದ್ ಅಬ್ಬೆಮಾರ್ ಸ್ವಾಗತಿಸಿದರು, ನಾಸಿರ್ ಮಿತ್ತರಾಜೆ ಉದ್ಘಾಟಿಸಿ, ಪ್ರಧಾನ ಕಾರ್ಯದರ್ಶಿ ಯಝೀದ್ ಕಲ್ಲಕಟ್ಟ ವಾರ್ಷಿಕ ವರದಿ ಮತ್ತು ಲೆಕ್ಕ ವಾಚಿಸಿದರು, ಸೆಕ್ಟರ್ ವೀಕ್ಷಕರಾಗಿ SSF ಮಂಚಿ ಸೆಕ್ಟರ್ ಕಾರ್ಯದರ್ಶಿ ಲುಕ್ಮಾನ್ ಕುಕ್ಕಾಜೆ & ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಫರ್ವಾಝ್ ಮಂಚಿ ಆಗಮಿಸಿದ್ದರು.

ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು, ಅಧ್ಯಕ್ಷರಾಗಿ ರಫೀಕ್ ಮಿತ್ತರಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಮಸೂದ್ ಅಬ್ಬೆಮ್ಮಾರ್, ಕೋಶಾಧಿಕಾರಿಯಾಗಿ ಯೂಸುಫ್ ಮಿತ್ತರಾಜೆ, ಉಪಾಧ್ಯಕ್ಷರಾಗಿ ನಝೀರ್ ಮಿತ್ತರಾಜೆ, ಹನೀಫ್ ಮಿತ್ತರಾಜೆ, ಕಾರ್ಯದರ್ಶಿ & ಮಾಧ್ಯಮ ಕಾರ್ಯದರ್ಶಿಯಾಗಿ ನಾಸಿರ್ ಮಿತ್ತರಾಜೆ, ಕಾರ್ಯದರ್ಶಿಯಾಗಿ ಫೈಝಲ್ ಮಿತ್ತರಾಜೆ, ಕ್ಯಾ‌ಂಪಸ್ ಕಾರ್ಯದರ್ಶಿಯಾಗಿ ಬಶೀರ್ ಮಿತ್ತರಾಜೆ, ಮಹಿಳಾ ತರಗತಿ ಉಸ್ತುವಾರಿಗಳಾಗಿ, ದಾವೂದ್ ಅಬ್ಬೆಮ್ಮಾರ್, ಶರೀಫ್ ಹನೀಫಿ ಉಸ್ತಾದ್, ಖಲೀಳ್ B ಮಿತ್ತರಾಜೆ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ, ಯಝೀದ್ ಕಲ್ಲಕಟ್ಟ. ಶರೀಫ್ ಅಬ್ಬೆಮ್ಮಾರ್, ಹಕೀಂ ವರ್ಗ, ರಹೀಂ ಮಣ್ಣಗದ್ದೆ, ಇಶಾಕ್ ಮಿತ್ತರಾಜೆ, ಅಲ್ತಾಫ್ ಪಂಜರಕೋಡಿ, ಜಲೀಲ್ Mk, ಹಕೀಂ ಮಿತ್ತರಾಜೆಯವರನ್ನು ಆಯ್ಕೆ ಮಾಡಲಾಯಿತು. ಕೊನೆಯಲ್ಲಿ ನೂತನ ಪ್ರಧಾನ ಕಾರ್ಯದರ್ಶಿ ಮಸೂದ್ ವಂದಿಸಿದರು.

error: Content is protected !! Not allowed copy content from janadhvani.com