janadhvani

Kannada Online News Paper

ಜ.30 ರಂದು ಉಡುಪಿಯಲ್ಲಿ ನಡೆಯುವ ಪ್ರತಿಭಟನೆ ಯಶಸ್ವಿಗೆ ಖಾಝಿ ಬೇಕಲ ಉಸ್ತಾದ್ ಕರೆ

ಉಡುಪಿ: ಭಾರತ ನಮ್ಮ ದೇಶ ಭಾರತೀಯತೆಯ ಉಳಿವಿಗಾಗಿ, ಸಂವಿಧಾನದ ರಕ್ಷಣೆಗಾಗಿ ಜಾತಿ ಆಧಾರದಲ್ಲಿ ಭಾರತೀಯರನ್ನು ವಿಭಜಿಸುವುದು ನಮ್ಮ ದೇಶದ ಸಂವಿಧಾನಕ್ಕೆ ವಿರುದ್ಧವಾಗಿದೆ.
ಜಾತಿ ಧರ್ಮ ಬೇಧ ಭಾವವಿಲ್ಲದೆ ಹೋರಾಡಿ ಭಾರತದ ಸಂವಿಧಾನವನ್ನು ಉಳಿಸಲು ಹೋರಾಡುವುದು ಭಾರತೀಯರಾದ ನಮ್ಮ ಕರ್ತವ್ಯವಾಗಿದೆ .

ಎನ್.ಆರ್.ಸಿ , ಸಿ.ಎ.ಎ ಮತ್ತು ಎನ್ ಪಿ ಆರ್ ಕೇಂದ್ರ ಸರ್ಕಾರದ ಕಾಯ್ದೆಯ ವಿರುದ್ಧ ಸಹಬಾಳ್ವೆ ಸಮಿತಿ ಉಡುಪಿ ಹಾಗೂ ಸಮಾನ ಮನಸ್ಕರ ಸಂಘಟನೆಗಳ ವತಿಯಿಂದ ಹಮ್ಮಿಕೊಂಡ ಬ್ರಹತ್ ಪ್ರತಿಭಟನೆಯ ಇಂದು ( ಜನವರಿ: 30) ಮಧ್ಯಾಹ್ನ ಗಂಟೆ 3ಕ್ಕೆ ಉಡುಪಿ ಮಿಷನ್ ಕಂಪೌಂಡ್ ಮೈದಾನದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಸರ್ವ ಧರ್ಮಗಳ ಸರ್ವರೂ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ತಾಜುಲ್ ಫುಖಹಾಅ ಶೈಖುನಾ ಪಿ.ಎಮ್ ಇಬ್ರಾಹಿಂ ಮುಸ್ಲಿಯಾರ್ ಬೇಕಲ ಕರೆ ನೀಡಿದ್ದಾರೆ.

error: Content is protected !! Not allowed copy content from janadhvani.com