janadhvani

Kannada Online News Paper

ಯಡಿಯೂರಪ್ಪರ ರಾಜಕೀಯ ಜೀವನಕ್ಕೆ ಅಂತ್ಯಹಾಡಲು ಹೈಕಮಾಂಡ್ ನಿರ್ಧಾರ ?

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಜೀವನವನ್ನು ಮುಗಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಎಚ್‌ಕೆ ಪಾಟೀಲ್ ಅವರು ಹೇಳಿದರು. ಎಎನ್​ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರಿಗೆ ಅವರ ಹೈಕಮಾಂಡ್ ಯಾವುದೇ ಬೆಂಬಲವನ್ನು ನೀಡದಿರುವ ಮೂಲಕ ಅವರನ್ನ ಅಸಮರ್ಥನನ್ನಾಗಿ ಮಾಡಲು ಬಯಸುತ್ತಿದೆ ಎಂದಿದ್ದಾರೆ.

ಅಂತೆಯೇ ಮಾತನಾಡಿ, ಇಲ್ಲಿವರೆಗೂ ರಾಜ್ಯದ ಕ್ಯಾಬಿನೆಟ್ ವಿಸ್ತರಣೆಯಾಗಿಲ್ಲ. ಈ ವಿಳಂಬವು ರಾಜ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ ಎಂದು ಹೆಚ್​.ಕೆ ಪಾಟೀಲ್ ಅವರು ನುಡಿದರು.

error: Content is protected !! Not allowed copy content from janadhvani.com