janadhvani

Kannada Online News Paper

ಕಂದಾವರ ನೂರುಲ್ ಇಸ್ಲಾಂ ಮಸ್ಜಿದ್: ಅಧ್ಯಕ್ಷರಾಗಿ ಹಾಜಿ ಎಂ. ಎಸ್ ಆಲಿಯಬ್ಬ ಆಯ್ಕೆ

ಗುರುಪುರ: ಕೈಕಂಬ ನೂರುಲ್ ಇಸ್ಲಾಂ ಮಸ್ಜಿದ್ ಹಾಗೂ ಮದ್ರಸ ಮೂಡುಕೆರೆ ಕಂದಾವರ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಮರ್ಕಝ್ ಕೈಕಂಬ ಚೇರ್ಮಾನ್ ಬದ್ರುದ್ದೀನ್ ಅಝ್ಹರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸ್ಥಳೀಯ ಇಮಾಂ ನಿಝಾರ್ ಸಖಾಫಿ ಉದ್ಘಾಟನೆಗೈದರು. ನಂತರ 2020-2021ನೇ ಸಾಲಿನ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.

ಗೌರವಾಧ್ಯಕ್ಷರಾಗಿ ಹಾಜಿ ಎಂ ಎಸ್ ಅಬ್ದುಲ್ ಖಾದರ್ (ಉಞಾಕ)
ಅಧ್ಯಕ್ಷರಾಗಿ ಹಾಜಿ ಎಂ ಎಸ್ ಆಲಿಯಬ್ಬ,
ಪ್ರಧಾನ ಕಾರ್ಯದರ್ಶಿಯಾಗಿ ನಿಝಾಮುದ್ದೀನ್ ಕಂದಾವರ,ಕೋಶಾಧಿಕಾರಿಯಾಗಿ ಹಾಜಿ ಮಹಮ್ಮದ್ ತೋಡಾರ್ ಆಯ್ಕೆಯಾದರು.
ಕ್ರಮವಾಗಿ ಉಪಾಧ್ಯಕ್ಷರಾಗಿ ಎಂ. ಇಬ್ರಾಹಿಂ ಸೂರಲ್ಪಾಡಿ ಜೊತೆ ಕಾರ್ಯದರ್ಶಿಯಾಗಿ ಕಮಾಲ್ ಕಂದಾವರ, ಲೆಕ್ಕ ಪರಿಶೋಧಕರಾಗಿ ಎಂ. ಎಸ್ ರಿಯಾಝ್.
ಸದ್ರಿ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ಎಸ್ ಅಬ್ದುಲ್ ಖಾದರ್, ಎಂ. ಹೆಚ್ ಶರೀಫ್, ಎಂ. ಎಸ್ ಅಬ್ದುಲ್ ಖಾದರ್ (ಚೆರುಞಿ), ಎಂ.ಹೆಚ್ ಇಲ್ಯಾಸ್, ಎಂ.ಹೆಚ್ ಮಯ್ಯದ್ದೀ,ಶೇಕ್ ಮಹಮ್ಮದ್, ರಫೀಕ್ ಕೆ.ಪಿ, ರಹೀಂ ಕೆ.ಪಿ, ಉಸ್ಮಾನ್ ಕಂದಾವರ, ಎ. ಯಂ. ಬಿ ಇಸ್ಮಾಯಿಲ್ ಆಯ್ಕೆಯಾದರು.

error: Content is protected !! Not allowed copy content from janadhvani.com