janadhvani

Kannada Online News Paper

SYS ರಾಜ್ಯ ಸಮಿತಿಗೆ ನೂತನ ನಾಯಕತ್ವ

ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ(SYS) ಇದರ ವಾರ್ಷಿಕ ಮಹಾಸಭೆಯು ಮಾಣಿ-ಕೊಡಾಜೆ ಜನಪ್ರಿಯ ಗಾರ್ಡನ್ ನಲ್ಲಿ ನಡೆಯಿತು.

ಜಿ.ಎಂ.ಎಂ.ಕಾಮಿಲ್ ಸಖಾಫಿಯವರು ಅಧ್ಯಕ್ಷತೆ ವಹಿಸಿದ್ದ ಸಭೆಯನ್ನು ಝೈನುಲ್ ಉಲಮಾ ಮಾಣಿ ಉಸ್ತಾದ್ ರವರು ಉಧ್ಘಾಟಿಸಿದರು. ಕೆ.ಪಿ.ಹುಸೈನ್ ಸಅದಿ ಕೆ.ಸಿ ರೋಡ್ ಹಾಗೂ ಕುಂಬಡಾಜೆ ಅಬೂಬಕರ್ ಫೈಝಿ ಸಂಘಬದುಕಿನ ಮಹತ್ವದ ಬಗ್ಗೆ ಬೋಧನೆ ನೀಡಿದರು. ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ವಿಷಯ ಮಂಡಿಸಿದರು. ನಂತರ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಪಿ.ಎಂ.ಉಸ್ಮಾನ್ ಸಅದಿ ಪಟ್ಟೋರಿ. ಮಂಗಳೂರು, ಕಾರ್ಯದರ್ಶಿಯಾಗಿ ಡಾ.ಎಮ್ಮೆಸ್ಸೆಂ. ಅಬ್ದುಲ್ ರಶೀದ್ ಸಖಾಫಿ ಝೈನೀ ಕಾಮಿಲ್, ಕೋಶಾಧಿಕಾರಿಯಾಗಿ ಅಬ್ದುಲ್ ಹಕೀಂ ಕೊಡ್ಲಿಪೇಟೆ, ಹಾಸನ.

ಉಫಾಧ್ಯಕ್ಷರಾಗಿ ಡಿ.ಕೆ.ಉಮರ್ ಸಖಾಫಿ ಕಂಬಳಬೆಟ್ಟು, ಸಾಂತ್ವನ ವಿಭಾಗದ ಅಧ್ಯಕ್ಷರಾಗಿ ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ, ಉಪಾಧ್ಯಕ್ಷರಾಗಿ ಹಾಜಿ ನವಾಝ್ ಅಹ್ಮದ್ ಬಳ್ಳಾರಿ, (ಉತ್ತರ ಕರ್ನಾಟಕ).

ಶಿಕ್ಷಣ ಮತ್ತು ದಅವಾ ವಿಭಾಗದ ಕಾರ್ಯದರ್ಶಿಯಾಗಿ ಸಯ್ಯಿದ್ ಎ.ಪಿ.ಎಸ್. ಹುಸೈನುಲ್ ಅಹ್ದಲ್ ತಂಙಳ್ ಬಾಖವಿ ಉಪ್ಪಳ್ಳಿ, ಚಿಕ್ಕಮಗಳೂರು, ಕಚೇರಿ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗ ಕಾರ್ಯದರ್ಶಿಯಾಗಿ ಸಯ್ಯಿದ್ ಜ’ಅಫರ್ ಸಖಾಫ್ ತಂಙಳ್ ಕೋಟೇಶ್ವರ, ಉಡುಪಿ.

ಪ್ರಕಾಶನ ಮತ್ತು ಮಾಧ್ಯಮ ವಿಭಾಗ ಕಾರ್ಯದರ್ಶಿಯಾಗಿ ಎಂ.ವೈ.ಅಬ್ದುಲ್ ಹಫೀಲ್ ಸ’ಅದಿ ಕೊಳಕೇರಿ, ಕೊಡಗು, ಇಸಾಬಾ ಟೀಂ ಇದರ ಕಾರ್ಯದರ್ಶಿಯಾಗಿ ಎಂ.ಇ.ಉಮರ್ ಸಖಾಫಿ ಎಡಪ್ಪಾಲ್, ಕೊಡಗು, ಕಾರ್ಯಕ್ರಮಗಳ ನಿರ್ವಹಣಾ ಕಾರ್ಯದರ್ಶಿಯಾಗಿ ಅಶ್ರಫ್ ಕಿನಾರಾ ಮಂಗಳೂರು.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಎಸ್.ಪಿ ಹಂಝ ಸಖಾಫಿ ಬಂಟ್ವಾಳ, ಟಿ.ಎಂ.ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ, ಕೆ.ಕೆ.ಎಂ.ಕಾಮಿಲ್ ಸಖಾಫಿ ಕೃಷ್ಣಾಪುರ, ಹನೀಫ್ ಹಾಜಿ ಉಳ್ಳಾಲ್, ಎನ್.ಎಸ್.ಉಮರ್ ಮಾಸ್ಟರ್ ಕೆಸಿ ರೋಡ್, ಕೆ.ಇ.ಅಬ್ದುಲ್ ಖಾದರ್ ರಝ್ವಿ ಸಾಲೆತ್ತೂರು, ಕೆಎಸ್ ಅಬೂಬಕರ್ ಸ’ಅದಿ ಮಜೂರು, ಎಂ.ಹಂಝ ಮದನಿ ಮಿತ್ತೂರು, ಸಯ್ಯಿದ್ ಎಸ್.ಎಂ.ಕೋಯ ತಂಙಳ್ ಉಜಿರೆ, ಹಾಜಿ ಸಿ.ಎ.ಕರೀಂ ಚೆನ್ನಾರ್, ಖಾಸಿಂ ಪದ್ಮುಂಜೆ, ಅಬೂಬಕರ್ ಕಡಂಗ, ಉಸ್ಮಾನ್ ಅಬ್ದುಲ್ಲಾ ಎಮ್ಮೆಮಾಡು, ಸಿ.ಎಂ.ಹಂಝ ನೆಲ್ಲಿಹುದಿಕೇರಿ, ಹಾಜಿ ಮುಹ್ಯಿದ್ದೀನ್ ಗುಡ್ ವಿಲ್ ಉಡುಪಿ, ಅಡ್ವಕೇಟ್ ಹಂಝತ್ ಹೆಜಮಾಡಿ, ಕೆ.ಎ.ಅಬ್ದುಲ್ ರಹ್ಮಾನ್ ರಝ್ವಿ ಉಡುಪಿ, ಎ. ಯೂಸುಫ್ ಹಾಜಿ ಉಪ್ಪಳ್ಳಿ, ಜೆ.ಎಸ್.ಮುಹಮ್ಮದ್ ಅಲಿ ಸಕಲೇಶಪುರ, ಅಬ್ದುಲ್ ಜಬ್ಬಾರ್ ಸ’ಅದಿ ರಿಪ್ಪನ್ ಪೇಟೆ, ಹನೀಫ್ ಬೆಜ್ಜವಳ್ಳಿ, ತೀರ್ಥಹಳ್ಳಿ, ಬಶೀರ್ ಹಾಜಿ ಪೀಣ್ಯ, ಬೆಂಗಳೂರು, ಕೆ.ಎಚ್.ಇಸ್ಮಾಯಿಲ್ ಸ’ಅದಿ ಕಿನ್ಯ ಇವರುಗಳನ್ನು ಆರಿಸಲಾಯಿತು.

ಡಿ.ಕೆ.ಉಮರ್ ಸಖಾಫಿಸ್ವಾಗತಿಸಿ ಅಶ್ರಫ್ ಕಿನಾರಾ ಧನ್ಯವಾದ ಹೇಳಿದರು.

error: Content is protected !! Not allowed copy content from janadhvani.com