janadhvani

Kannada Online News Paper

ಜ.20: ಕಟಪಾಡಿಯಲ್ಲಿ CAA ವಿರುದ್ದ ಬೃಹತ್ ಪ್ರತಿಭಟನೆ- ಯಶಸ್ವಿಗೆ ಉಡುಪಿ ಜಿಲ್ಲಾ SSF ಕರೆ

ಉಡುಪಿ : ಕೇಂದ್ರ ಸರಕಾರದ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಕಾಯಿದೆಯನ್ನು ವಿರೋಧಿಸಿ ಉಡುಪಿ ನಾಗರಿಕ ಹಕ್ಕು ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನಾ ಸಮಾವೇಶವನ್ನು ( ಜ. 20) ರಂದು ಮಧ್ಯಾಹ್ನ 3.30ಕ್ಕೆ ಕಟಪಾಡಿ ಪೇಟೆಯಲ್ಲಿ ಆಯೋಜಿಸಲಾಗಿದೆ.

ಈ ಸಮಾವೇಶವನ್ನು ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಶೈಖುನಾ ಅಲ್‌ಹಾಜ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉಸ್ತಾದ್ ಉದ್ಘಾಟಿಸಲಿರುವರು. ಮುಖ್ಯ ಭಾಷಣಕಾರರಾಗಿ ಕೆ.ಎಂ.ಸಿದ್ದೀಕ್ ಮೋಂಟುಗೋಳಿ, ಸುಧೀರ್ ಕುಮಾರ್ ಮುರೋಳಿ, ಮಧುಸೂದನ್ ಗೌಡ ಹಾಗೂ ಪ್ರಗತಿಪರ ಹೋರಾಟಗಾರರು, ಚಿಂತಕರು ಭಾಗವಹಿಸಲಿರುವರು. ಈ ಸಮಾವೇಶಕ್ಕೆ ಡಿವಿಷನ್ ವ್ಯಾಪ್ತಿಯ ಎಲ್ಲಾ ಮೊಹಲ್ಲಾ ಕೇಂದ್ರೀಕರಿಸಿ ಬಸ್ ವ್ಯವಸ್ಥೆಗೊಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಕರೆ ನೀಡುತ್ತಿದೆ ಎಂದು ಪ್ರ.ಕಾರ್ಯದರ್ಶಿ ಎನ್. ಸಿ ರಹೀಮ್ ಹೊಸ್ಮಾರ್ ಪ್ರಕಟನೆಯಲ್ಲಿ ತಿಳಿಸಿರುವರು.

ವರದಿ : ಪಿ.ಎಂ.ಎಸ್ ಪಡುಬಿದ್ರಿ.

error: Content is protected !! Not allowed copy content from janadhvani.com