ಪುತ್ತೂರು,ಡಿ.7 :- ಅನಿವಾಸಿ ಬನ್ನೂರು ಸುನ್ನಿ ಕಾರ್ಯಕರ್ತರ ಸಂಘವಾದ ಜಿಸಿಸಿ ಸುನ್ನಿ ಫ್ರೆಂಡ್ಸ್ ಬನ್ನೂರು ಇದರ ವತಿಯಿಂದ ಹೆಣ್ಣು ಮಕ್ಕಳ ಮದುವೆಗಾಗಿ ಆರ್ಥಿಕ ಸಹಾಯ ನೀಡಲಾಯಿತು.
ಎರಡು ಬಡ ಕುಟುಂಬದ ಮೂರು ಹೆಣ್ಣು ಮಕ್ಕಳ ಮದುವೆಗೆ 55,000 ರೂಪಾಯಿ ಧನ ಸಹಾಯವನ್ನು ಡಿ,7-2019 ರಂದು ಬನ್ನೂರು ಸುನ್ನಿ ಸೆಂಟರ್ ನಲ್ಲಿ ಬಹು| ಉಮ್ಮರ್ ತಂಙಳ್ ಬನ್ನೂರು ರವರ ದುಆಃ ಅಶಿರ್ವಾದದೊಂದಿಗೆ ಜಿಸಿಸಿ ಸುನ್ನೀ ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಕರ್ಮಲ (ಕೆಎಸ್ಎ) ರವರು ಒಂದು ಕುಟುಂಬಕ್ಕೆ 33,000 ರೂಪಾಯಿ ಹಾಗೂ ಮತ್ತೊಂದು ಕುಟುಂಬಕ್ಕೆ 22,000 ರೂಪಾಯಿ ಮೊತ್ತ 55,000 ರೂಪಾಯಿಯ ಚೆಕ್ ನ್ನು ಹಸ್ತಾಂತರಿಸಿದರು.
ಎಸ್ ವೈ ಎಸ್ ಬನ್ನೂರು ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮುಸ್ಲಿಯಾರ್ ಬನ್ನೂರು, ಎಸ್ ವೈ ಎಸ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ, ಕೋಶಾಧಿಕಾರಿ ಪಿ,ಪಿ ಆದಂ ಹಾಜಿ ಪಡೀಲ್, ಸುನ್ನಿ ಸೆಂಟರ್ ಅಧ್ಯಕ್ಷರಾದ ಫಾರೂಕ್, ಪ್ರಧಾನ ಕಾರ್ಯದರ್ಶಿ ಹಮೀದ್ ಲಕ್ಕಿಸ್ಟಾರ್ ಎಸ್ ವೈ ಎಸ್ ಸದಸ್ಯರಾದ ಅಬೂಬಕ್ಕರ್ ಪಾಪ್ಲಿ ಉಪಸ್ಥಿತರಿದ್ದರು.