janadhvani

Kannada Online News Paper

ಸೌದಿ ಕೆ ಸಿ ಎಫ್ ನೆರವಿನಿಂದ ಶಾಬಾಝ್ ಅಂತ್ಯಕ್ರಿಯೆ

ಸೌದಿ ಅರೇಬಿಯಾದ ದಮ್ಮಾಮ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಉತ್ತರ ಪ್ರದೇಶದ(UP) ನಿವಾಸಿ ಶಾಬಾಝ್ ಸೈಯದ್ ಅಹ್ಮದ್ ಎಂಬ ಸಹೋದರೊಬ್ಬರು ಕಳೆದ ಕೆಲವು ದಿನಗಳ ಹಿಂದೆ ಮರಣಹೊಂದಿದ್ದು, ಅವರ ಅಂತ್ಯಕ್ರಿಯೆಗೆ ಬೇಕಾದ ಸಕಲ ದಾಖಲೆಗಳನ್ನು ಕೆ.ಸಿ.ಎಫ್ ಸೌದಿ ಅರೇಬಿಯಾ ಸಾಂತ್ವನ ವಿಭಾಗದ ಅಧ್ಯಕ್ಷರಾದ ಮುಹಮ್ಮದ್ ಮಲೆಬೆಟ್ಟು ಹಾಗೂ ಕೆ.ಸಿ.ಎಫ್ ದಮ್ಮಾಮ್ ಝೋನ್ ಸಾಂತ್ವನ ವಿಭಾಗದ ಕಾರ್ಯದರ್ಶಿಗಳಾದ ಬಾಷಾ ಗಂಗಾವಳಿಯವರ ನೇತೃತ್ವದಲ್ಲಿ ಸರಿಪಡಿಸಿ.ಡಿಸಂಬರ್ 06 ರಂದು ಜುಮಾ ನಮಾಜಿನ ಬಳಿಕ ದಮ್ಮಾಮ್ 91 ಫುರ್ಖಾನ್ ಮಸ್ಜಿದ್ ನಲ್ಲಿ ಮಯ್ಯಿತ್ ನಮಾಜ್ ನಿರ್ವಹಿಸಿ ಬಳಿಕ ದಮ್ಮಾಮ್ 91 ನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.ಈ ಸಂದರ್ಭದಲ್ಲಿ ಕೆ.ಸಿ.ಎಫ್ ಸೌದಿ ಅರೇಬಿಯಾದ ಅಧ್ಯಕ್ಷರಾದ ಡಿ.ಪಿ.ಯೂಸುಫ್ ಸಖಾಫಿ ಬೈತಾರ್ ರವರು ಹಾಗೂ ಕೆ.ಸಿ.ಎಫ್ ನ ಇತರ ನಾಯಕರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com