janadhvani

Kannada Online News Paper

ಅಸಾಸ್ ಮಲ್ಲೂರು: ಬೃಹತ್ ಮಜ್ಲಿಸ್ ಅಹ್ಲ್ ಬದ್ರ್ ಹಾಗೂ ಅನುಸ್ಮರಣಾ ಸಮ್ಮೇಳನ

ಮಲ್ಲೂರು : ಅಸಾಸ್ ಎಜುಕೇಶನ್ ಸೆಂಟರ್ ಮಲ್ಲೂರು ಇದರ ಅಧೀನದಲ್ಲಿ ಪ್ರತಿ ತಿಂಗಳು ನಡೆಯುವ ಹಲವಾರು ಪವಾಡಗಳಿಗೆ ಶಾಕ್ಷಿಯಾದ, ರೋಗರುಜಿನಗಳಿಗೆ ಶಮನವಾಗಿ ಪಮಾರ್ಪಟ್ಟ “ಮಜ್ಲಿಸ್ ಅಹ್ಲ್ ಬದ್ರ್” ಸಂಗಮ ಹಾಗೂ ತಾಜುಲ್ ಉಲಮಾ, ನೂರುಲ್ ಉಲಮಾ, ಸಜಿಪ ಉಸ್ತಾದ್ ಅನುಸ್ಮರಣಾ ಸಮ್ಮೇಳನವು ನಾಳೆ(06-12-2019 ಶುಕ್ರವಾರ) ರಾತ್ರಿ ಅಸಾಸ್ ಸಭಾಂಗಣದಲ್ಲಿ ನಡೆಯಲಿದೆ.

ಪ್ರಸ್ತುತ ಕಾರ್ಯಕ್ರಮಕ್ಕೆ ಸ್ಥಳೀಯ ಮುದರ್ರಿಸ್ ಸಯ್ಯಿದ್ ನಿಝಾಮುದ್ದೀನ್ ಬಾಫಖಿ ಅಸ್ಸಖಾಫಿ ನೇತೃತ್ವ ನೀಡಲಿದ್ದಾರೆ.ಅಸಾಸ್ ಸಾರಥಿ ಎಂ.ಪಿ.ಎಂ.ಅಶ್ರಫ್ ಸಅದಿ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ.

ದುಬೈ ಅವ್ಕಾಫ್ ಮಸೀದಿ ಇಮಾಂ ಫವಾಝ್ ಖಾಲಿದ್ ಅಲ್ ಅಝ್ಹರಿ ಅರಬಿ ನಶೀದ ಆಲಾಪನೆಗೈಯ್ಯಲಿದ್ದಾರೆ.

ಮುಖ್ಯ ಅತಿಥಿಗಳಾಗಿ, ಅಬೂರಾಶಿದ್ ಐ ಎಂ ಕೆ ಮದನಿ ಮೊರೋಕ್ಕೊ, ಎ.ಎ.ಹೈದರ್ ಪರ್ತಿಪಾಡಿ,
ಅಬ್ದುಲ್ ಅಝೀಝ್ ಮುಸ್ಲಿಯಾರ್( ದಮಾಮ್)
ಆರ್.ಕೆ.ಮದನಿ ಅಮ್ಮೆಂಬಳ, ಬಹು! ಹುಸೈನ್ ಸಖಾಫಿ ಕಕ್ಕಿಂಜೆ(ಮುದರ್ರಿಸ್ ಅಸಾಸ್ ಮಲ್ಲೂರು.), ಬಹು ! ಕಾಸಿಂ ಮದನಿ ಬೊಳ್ಳಾಯಿ
(ಪ್ರಾಧ್ಯಾಪಕರು ಅಸಾಸ್ ಮಲ್ಲೂರು) ಭಾಗವಹಿಸಲಿದ್ದಾರೆ.

ಪ್ರಸ್ತುತ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮುಹಬ್ಬತೇ ಅಸಾಸ್ ಉಪಾಧ್ಯಕ್ಷರಾದ ಎಂ.ಎಸ್.ಜೆಲೀಲ್ ಮಲ್ಲೂರು ಕರೆ ನೀಡಿದ್ದಾರೆ.

error: Content is protected !! Not allowed copy content from janadhvani.com