janadhvani

Kannada Online News Paper

ಡಾ.ಹಕೀಂ ಅಝ್ಹರಿ ಮಲ್ಲೂರಿಗೆ- ಯಶಸ್ವಿಗೆ ಸುನ್ನೀ ಕೋರ್ಡಿನೇಷನ್ ಕಮಿಟಿ ಕೈಕಂಬ ಕರೆ

ಕೈಕಂಬ: ಪ್ರಮುಖ ವಾಗ್ಮಿಯೂ SYS ರಾಜ್ಯ ನಾಯಕರೂ ಆದ ಮೌಲಾನಾ ಎಂ.ಪಿ.ಎಂ ಅಶ್ರಫ್ ಸಅದಿ ಮಲ್ಲೂರು ಇವರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಅಸಾಸ್ ಎಜುಕೇಷನಲ್ ಸೆಂಟರ್ ಸಂಸ್ಥೆಯಲ್ಲಿ ನವೆಂಬರ್ 10( ನಾಳೆ) ಸುಬಹಿ ನಮಾಝಿನ ಬಳಿಕ ಬೃಹತ್ ಹುಬ್ಬುರ್ರಸೂಲ್ ಮಜ್ಲಿಸ್ ನಡೆಯಲಿದೆ.

ಹಲವಾರು ಉಲಮಾ ಶಿರೋಮಣಿಗಳು ಭಾಗವಹಿಸಲಿದ್ದು ಪ್ರತ್ಯೇಕವಾಗಿ ಪ್ರಮುಖ ವಿದ್ವಾಂಸರೂ ಇಂಡಿಯನ್ ಗ್ರಾಂಡ್ ಮುಫ್ತಿ A.P ಉಸ್ತಾದರ ಸುಪುತ್ರ ಡಾ.ಅಬ್ದುಲ್ ಹಕೀಂ ಅಝ್ಹರಿ ಹುಬ್ಬುರ್ರಸೂಲ್ ಪ್ರಭಾಷಣ ಮಾಡಲಿದ್ದಾರೆ.

ಅದೇ ರೀತಿ ಸಂಸ್ಥೆಯ ಪ್ರಧಾನ ಮುದರ್ರಿಸರಾದ ನಿಝಾಮುದ್ದೀನ್ ಬಾಫಕಿ ತಂಙಳ್ ದುಆಃ ಆಶೀರ್ವಚನ ನಡೆಸಲಿದ್ದಾರೆ. ನವೆಂಬರ್ 12,13 ರಂದು ಮದ್ಹೇ ಮುಸ್ತಫಾ ಕಾಂಫರನ್ಸ್, ಬುರ್ದಾ ಮಜ್ಲಿಸ್, ಸಂಸ್ಥೆಯ ವಿಧ್ಯಾರ್ಥಿಗಳಿಂದ ಮುನಾಫಸಾ ಕಾರ್ಯಕ್ರಮ ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮ ಯಶಸ್ವಿಗೊಳಿಸಲು ಸುನ್ನೀ ಕೋರ್ಡಿನೇಷನ್ ಕಮಿಟಿ ಕೈಕಂಬ ಕರೆ ನೀಡಿದೆ.

ಪ್ರತ್ಯೇಕವಾಗಿ ಸುನ್ನೀ ಕೋರ್ಡಿನೇಷನ್ ಸಮಿತಿಯ ಅಂಗ ಸಂಘಟನೆಗಳಾದ SJU, SJM, SMA, SYS, SSF ನೇತಾರರು ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸುನ್ನೀ ಕೋರ್ಡಿನೇಷನ್ ಕಮಿಟಿ ಕೈಕಂಬ ಇದರ ಪ್ರಧಾನ ಕಾರ್ಯದರ್ಶಿ ಶಾಫಿ ಮದನಿ ಕರಾಯ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

error: Content is protected !! Not allowed copy content from janadhvani.com